Friday 19 December 2014

ಗಾಂಧಿಯನ್ನು ಕೊಂದದ್ದು ಗೋಡ್ಸೆಯಾದರೆ ಗಾಂಧಿ ತತ್ವಗಳನ್ನು ಕೊಂದದ್ದು ಕಾಂಗ್ರೆಸ್!

ನರೇಂದ್ರ ಮೋದಿ ಅವರ ಆಡಳಿತ ಪ್ರಾರಂಭದ ದಿನದಿಂದಲೂ ಈವರೆಗೂ ಸರ್ಕಾರದ ವಿರುದ್ಧ ಪ್ರತಿಭಟಿಸಲು ವಿರೋಧಪಕ್ಷಗಳಿಗೆ ವಿಷಯವೇ ಸಿಕ್ಕಿಲ್ಲ. ಎರಡು ಅಂಕಿ ದಾಟದ ಕಾಂಗ್ರೆಸ್ಸಿಗರು ವಿಪಕ್ಷ ಸ್ಥಾನ ಪಡೆಯದೇ ಇದ್ದರೂ ಹೇಗಾದರೂ ಸರ್ಕಾರವನ್ನು ಹಣಿಯಲೇಬೇಕೆಂಬ ತೀರ್ಮಾನಕ್ಕೆ ಬಂದಿತ್ತು. ಒಂದಷ್ಟು ದಿನ ಕಪ್ಪು ಹಣದ ವಿಷಯ ಸಿಕ್ಕಿತಾದರೂ ಅದನ್ನು ಸರ್ಕಾರದ ವಿರುದ್ಧ ಅಸ್ತ್ರವಾಗಿ ಬಳಸಲು ಕಾಂಗ್ರೆಸ್ಸಿಗರಿಗೆ ಸಾಧ್ಯವಾಗಲಿಲ್ಲ. ಆನಂತರ ಸಚಿವೆ ಸಾದ್ವಿ ನಿರಂಜನ ಜ್ಯೋತಿ ನೀಡಿದ ವಿವಾದಾತ್ಮಕ ಹೇಳಿಕೆ ವಿಷಯದ ಬಗ್ಗೆ ಒಂದಷ್ಟು ದಿನ ಕಾಲಹರಣ ಮಾಡಿದರು. ಕೊನೆಗೆ ಸಾಕ್ಷಿ ಮಹಾರಾಜ್ ಗಾಂಧಿ ಬಗ್ಗೆ ಹೇಳಿಕೆ ನೀಡುವವರೆಗೂ ಕಾಂಗ್ರೆಸ್ ಗೆ ಸಂಸತ್ ನಲ್ಲಿ ಆಹಾರವಿಲ್ಲದಂತಾಗಿತ್ತು.

ವಿಪಕ್ಷದಲ್ಲಿದ್ದರೂ ಸರಿ, ಅಧಿಕಾರದಲ್ಲಿದ್ದರೂ ಸರಿ, ಅಸಲಿಯೋ ಅಥವಾ ನಕಲಿಯೋ ಒಟ್ಟಿನಲ್ಲಿ ಗಾಂಧಿ ಎಂಬ ಹೆಸರಿಲ್ಲದೇ ಕಾಂಗ್ರೆಸ್ಸಿಗರ ಅಸ್ಥಿತ್ವವೇ ಇಲ್ಲ. ತಮ್ಮ ಪಕ್ಷದವರನ್ನು ಹೊರತುಪಡಿಸಿ ಗಾಂಧಿ ಹೆಸರನ್ನು ಮತ್ತೊಬ್ಬರು ಹೇಳಿದರೂ ಸಹಿಸಲು ಸಾಧ್ಯವಾಗುವುದಿಲ್ಲ ಇವರಿಗೆ. ಅಂಥದ್ದರಲ್ಲಿ ಸಾಕ್ಷಿಮಹಾರಾಜರು, 'ಗಾಂಧಿಯನ್ನು ಕೊಂದಿದ್ದು ಗೋಡ್ಸೆ, ಆದರೆ ಗಾಂಧಿ ತತ್ವಗಳನ್ನು ಕೊಂದದ್ದು ಕಾಂಗ್ರೆಸ್ಸೇ' ಎಂದು ಸತತ ಒಂದು ವಾರ ಕಾಲ ಕಿರುಚುತ್ತಿದ್ದ ಕಾಂಗ್ರೆಸ್ಸಿಗರ ಬಾಯಿ ಮುಚ್ಚಿಸಿದ್ದರು!. ಗಮನಾರ್ಹ ವಿಷವೆಂದರೆ ಗಾಂಧಿ ಕೊಲೆಯ ಬಗ್ಗೆ ಕಾಂಗ್ರೆಸ್ಸಿಗರ ಮೇಲೆ ಆರೋಪ ಮಾಡಿದರೂ ಸಹ ಸಾಧ್ವಿ ನಿರಂಜನ ಜ್ಯೋತಿ ಅವರಿಗೆ ವ್ಯಕ್ತವಾದ ಪ್ರತಿಭಟನೆ ಸಾಕ್ಷಿ ಮಹಾರಾಜರ ಹೇಳಿಕೆಗೆ ವಿರೋಧ ವ್ಯಕ್ತವಾಗಲಿಲ್ಲ. ಹಾಗಾದರೆ ಗಾಂಧಿ ತತ್ವಗಳನ್ನು ಕಾಂಗ್ರೆಸ್ಸಿಗರು ಕೊಲೆ ಮಾಡಲಿಲ್ಲವೇ? ಅದೇಕೆ ಮಾಡಲಿಲ್ಲ. ಸ್ವಾತಂತ್ರ್ಯ ನಂತರ ವಿಸರ್ಜನೆಯಾಗಬೇಕಿದ್ದ ಕಾಂಗ್ರೆಸ್, ರಾಜಕೀಯ ಪಕ್ಷವಾಗಿ ತಲೆ ಎತ್ತಿನಿಂತಿದ್ದೇ ಗಾಂಧಿ ತತ್ವದ ಸಮಾಧಿ ಮೇಲೆ! ಅರ್ಥಾತ್ ಹುಟ್ಟಿದ್ದೇ ಗಾಂಧಿ ತತ್ವದ ಕಗ್ಗೊಲೆಯ ಮೂಲಕ.

ದೇಶದ್ರೋಹದ ಕೆಲಸಗಳನ್ನು ಮಾಡಿ ಕೊನೆಗೆ ಸೋಗಲಾಡಿಗಳ ವೇಷದಲ್ಲಿ ಗಾಂಧಿ ತತ್ವಗಳನ್ನು ಮುಂದಿಟ್ಟು ಮತ ಬೇಡಿ ಅಧಿಕಾರಕ್ಕೆ ಬಂದರಲ್ಲ ಅದು ಗಾಂಧಿ ತತ್ವದ ಕೊಲೆಯಲ್ಲವೇ? 60ವರ್ಷ ನಿರಂತರವಾಗಿ ದೇಶದ ಜನರಿಗೆ ಮೋಸ ಮಾಡಿತ್ತಲ್ಲ ಅದು ಗಾಂಧಿ ತತ್ವಗಳ ಕೊಲೆಯಾದೀತು. ಗೋಹತ್ಯೆ, ಮತಾಂತರ ಎಂದಾಗ ಅರಚುತ್ತಾ ಅಲ್ಪಸಂಖ್ಯಾತರ ಪರ ವಹಿಸಿಕೊಂಡು ಮಾತನಾಡುತ್ತಾರಲ್ಲ ಅದು ಕೂಡ ಗಾಂಧಿ ತತ್ವದ ಕೊಲೆಯಾಗುತ್ತದೆ. ಸ್ವಾತಂತ್ರ್ಯ ನಂತರ ಕಾಂಗ್ರೆಸ್ ಪಕ್ಷವನ್ನು ವಿಸರ್ಜನೆಗೊಳಿಸಬೇಕೆಂದ ಗಾಂಧಿ ಅವರ ಮಾತು ಮೀರಿ ನಡೆದರಲ್ಲಾ ಅದನ್ನು ಏನೆನ್ನಬೇಕು?
ಚೆಗೆವೆರಾ ಎದುರು ಬೊಲಿವಿಯನ್ ಸೇನಾ ಅಧಿಕಾರಿ ಪಿಸ್ತೂಲು ಹಿಡಿದು ನಿಂತ ಸಂದರ್ಭದಲ್ಲಿ ಆತ ಹೇಳಿದ್ದ ಮಾತು ನೆನಪಾಗುತ್ತದೆ. I know you are here to kill me. Shoot, coward, you are only going to kill a man, ಗುಂಡು ಹೊಡಿ. ನೀನು ಸಾಯಿಸುವುದು ವ್ಯಕ್ತಿಯನ್ನೇ ಹೊರತು ವಿಚಾರವನ್ನಲ್ಲ’! ಎಂದು ಹೇಳಿದ್ದ ಮಾತದು. ಇಲ್ಲಿ ಆ ಮಾತುಗಳು ನೆನಪಾಗುತ್ತವೆ. ಈ ನೆಲೆಗಟ್ಟಿನಿಂದ ನೋಡಿದರೆ ಗಾಂಧಿಯನ್ನು ಶಾಶ್ವತವಾಗಿ ಕೊಂದದ್ದು ದೇಹಕ್ಕೆ ಗುಂಡಿಟ್ಟುಕೊಂದ ನಾಥೂರಾಮ್ ಗೋಡ್ಸೆಯೋ ಅಥವಾ ವಿಚಾರಗಳಿಗೆ 60 ವರ್ಷಗಳಿಂದ slow poison ಉಣಿಸುತ್ತಾ ಬಂದ ಕಾಂಗ್ರೆಸ್ಸಿಗರೋ ಎಂಬುದು ಸ್ಪಷ್ಟವಾಗುತ್ತದೆ.

ಇಷ್ಟಕ್ಕೂ ಸ್ವಾತಂತ್ರ್ಯ ಬಂದ ನಂತರ ಹಲವು ವರ್ಷಗಳು ಗಾಂಧಿಯನ್ನು ನಮ್ಮೊಂದಿಗಿರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆದರೆ ಬಾಯ್ಬಿಟ್ಟರೆ ಗಾಂಧಿಗಿರಿಯನ್ನೇ ಉಸುರುವ ನಕಲಿ ಗಾಂಧಿಗಳು ದೇಶ ಲೂಟಿ ಮಾಡುವ ಮೂಲಕ ಗಾಂಧಿ ತತ್ವಗಳನ್ನು ಎಂದಿಗೋ ಕೊಲೆ ಮಾಡಿದರು!. ಆದರೆ ಎಲ್ಲವನ್ನೂ ಮಾಡಿದ ಕಾಂಗ್ರೆಸ್ಸಿಗರು ಮಾತ್ರ ಲೋಕಸಭೆಯಲ್ಲಿ ಕಿರುಚತೊಡಗಿದರು.

ಸಂಸತ್ ಕಲಾಪದಲ್ಲಿ ಮತಾಂತರ ನಿಷೇಧ ಕಾಯ್ದೆ, ಗೋಹತ್ಯೆ ನಿಷೇಧ ಕಾಯ್ದೆ ವಿಷಯಗಳು ಚರ್ಚೆಯಾದ ಸಂದರ್ಭದಲ್ಲಿ ಗಾಂಧಿ ಹೆಸರನ್ನು ಗುತ್ತಿಗೆಗೆ ಪಡೆದಿರುವ ಕಾಂಗ್ರೆಸ್ಸಿಗರು ಅವರ ತತ್ವಗಳಿಗೇಕೆ ವಿರುದ್ಧವಾಗಿ ಮಾತನಾಡುತ್ತಾರೆ? ಸಾಧ್ವಿ ನಿರಂಜನ ಜ್ಯೋತಿ ಅವರು ಈ ದೇಶದಲ್ಲಿ ರಾಮನ ಮಕ್ಕಳು ಮಾತ್ರ ದೇಶದಲ್ಲಿರಬೇಕೆಂದು ಹೇಳಿದಾಗ ಗಾಂಧಿಯ ರಾಮರಾಜ್ಯದ ಕನಸಿನ ಆಯಾಮವನ್ನೂ ಮರೆತು ಸಂಸತ್ ನಲ್ಲಿ ಗದ್ದಲವೆಬ್ಬಿಸಿದರು. ರಾಜೀನಾಮೆ ಕೇಳಿದರು. ಕಾಂಗ್ರೆಸ್ಸಿಗರು ಗಾಂಧಿಜಿ ತತ್ವ ಹಾಗೂ ಆ ಹೆಸರನ್ನು ನಿತ್ಯನಿರಂತರವಾಗಿ ತಮಗೆ ಬೇಕಾದ ರೀತಿಯಲ್ಲಿ ದುರುಪಯೋಗಪಡಿಸಿಕೊಂಡಿದ್ದಾರೆ ಎನ್ನಲು ಇದಕ್ಕಿಂತ ಉದಾಹರಣೆ ಬೇಕಾ?

ಇನ್ನು ಮತಾಂತರದ ವಿಷಯದಲ್ಲಿಯೂ ಕಾಂಗ್ರೆಸ್ ಪಕ್ಷ ಎಂದಿಗೂ ನಡೆದುಕೊಂಡಿರುವುದು ಗಾಂಧಿ ತತ್ವಗಳಿಗೆ ವಿರುದ್ಧವಾಗಿಯೇ, ಪಾಕಿಸ್ತಾನದಲ್ಲಿ ಹಿಂದೂಗಳ ದೇವಾಲಯ ಧ್ವಂಸ, ಬಾಂಗ್ಲಾದೇಶದಲ್ಲಿ ಹಿಂದೂಗಳ ಮತಾಂತರ ಎಗ್ಗಿಲ್ಲದೇ ನಡೆಯುತ್ತಿದ್ದರೂ ಇವರದ್ದೇ ಸರ್ಕಾರ ಇದ್ದಾಗ ಶಿಖಂಡಿಗಳಂತೆ ವರ್ತಿಸಿದ್ದರು. ಆದರೆ ಉತ್ತರ ಪ್ರದೇಶದಲ್ಲಿ 57 ಮುಸ್ಲಿಮ್ ಕುಟುಂಬಗಳು ಹಿಂದೂ ಧರ್ಮಕ್ಕೆ ವಾಪಸ್ಸಾಗಿದನ್ನು ಮಾತ್ರ ಸಹಿಸಲಾಗಲಿಲ್ಲ. ಆಗ ಗಾಂಧಿ ತತ್ವಗಳ ಬಗ್ಗೆ ಕಾಂಗ್ರೆಸ್ಸಿಗರಿಗೆ ನೆನಪಾಗಲಿಲ್ಲ. ಗಾಂಧಿಯನ್ನು ಕೊಂದಿದ್ದು ಗೋಡ್ಸೆಯಾದರೂ ಗಾಂಧಿ ತತ್ವಗಳನ್ನು ಕೊಂದಿದ್ದು ಮಾತ್ರ ತಾವೇ ಎಂದು ಮನಸ್ಸಾಕ್ಷಿ ಚುಚ್ಚಲಿಲ್ಲ. ಆದರೂ ಸಾಕ್ಷಿ ಮಹಾರಾಜ್ ಹೇಳಿಕೆಗೆ ಪ್ರತಿಭಟಿಸುತ್ತಾರೆಂದರೆ ಕಾಂಗ್ರೆಸ್ಸಿಗರು ಅದೆಂಥಹ ನೈತಿಕ ಭ್ರಷ್ಟರಿರಬೇಕು?
ಇವೆಲ್ಲದ್ದಕ್ಕೂ ಮೀರಿದ ಗಾಂಧಿ ತತ್ವ ಅಂಹಿಸೆ, ಕಾಂಗ್ರೆಸ್ಸಿಗರು ಅದನ್ನು ಎಷ್ಟರ ಮಟ್ಟಿಗೆ ಪಾಲಿಸಿದ್ದಾರೆ? ಗಾಂಧಿಯನ್ನು ಹತ್ಯೆ ಮಾಡಿದವ ಬ್ರಾಹ್ಮಣ ಎಂಬ ಕಾರಣಕ್ಕೆ ಬಾಂಬೆಯಲ್ಲಿ ಅದೆಷ್ಟು ಬ್ರಾಹ್ಮಣರ ಮೇಲೆ ದಾಳಿ ನಡೆದಿಲ್ಲ? ಇಂದಿರಾ ಗಾಂಧಿಯನ್ನು ಕೊಂದವರ ಸಮುದಾಯದವರೆಂಬ ಕಾರಣಕ್ಕೆ ಅದೆಷ್ಟು ಸಿಖ್ಖರನ್ನು ಹತ್ಯೆ ಮಾಡಿಲ್ಲ? ಗಾಂಧಿ ತತ್ವಗಳ ಬಗ್ಗೆ ಉದ್ದುದ್ದ ಭಾಷಣ ಬಿಗಿಯುವವರು ಇಂತಹ ಸಂದರ್ಭದಲ್ಲಿ ಅಹಿಂಸೆಯನ್ನು ತಡೆಯಬಹುದಿತ್ತಲ್ಲ. ಇವೆಲ್ಲವನ್ನೂ ಬಿಡಿ, ದೇಶವನ್ನು ಕೇಕ್ ಕತ್ತರಿಸಿದ ರೀತಿಯಲ್ಲಿ ಕತ್ತರಿಸಿ ಹಂಚಿದಾಗ ಪಾಕಿಸ್ತಾನದಿಂದ ಭಾರತಕ್ಕೆ ಹೊರಟ ಹಿಂದೂ ಮಹಿಳೆಯರು ಮಾನ ಕಳೆದುಕೊಂಡು ಅಹಿಂಸಾವಾದಿಯಾದ ಗಾಂಧಿ ಎದುರೇ ಹೆಣಗಳಾಗಿ ಬಿದ್ದಾಗ ಕಾಂಗ್ರೆಸ್ಸಿಗರು ಅಹಿಂಸಾ ತತ್ವವನ್ನು ಮರೆತೇಬಿಟ್ಟಿದ್ದರು. ಹಾಗಾದರೆ ಇಷ್ಟೆಲ್ಲಾ ನಡೆದಾಗಲೂ ಸುಮ್ಮನಿದ್ದ ಕಾಂಗ್ರೆಸ್ಸಿನವರು ಗಾಂಧಿ ಬದುಕಿದ್ದಾಗಲೇ ಅವರ ಕೊಲೆ ಮಾಡಿದ್ದರು ಎಂಬುದು ಸಾಬೀತಾದಂತಾಯಿತು. ಆದರೂ ಸಾಕ್ಷಿ ಮಹಾರಾಜ್ ಹೇಳಿಕೆ ನಿಜ ಅನ್ನಿಸಲಿಲ್ಲ. ಅಧಿಕಾರಕ್ಕಾಗಿ ಏನನ್ನೂ ಮಾಡಲು ತಯಾರಿರುವವರಿಗೆ ಗಾಂಧಿ ತತ್ವಗಳನ್ನು ಕೊಲ್ಲುವುದು ಕಷ್ಟದ ಕೆಲಸವಾಗದು. ಏಕೆಂದರೆ ಅವರಿಗೆ ತತ್ವ ಸಿದ್ಧಾಂತಗಳಿಗಿಂತ ಲೂಟಿ ಹೊಡೆಯುವುದೇ ಮುಖ್ಯ. ಲೂಟಿ ಹೊಡೆಯುವುದಕ್ಕೆ ಅಧಿಕಾರ ಮುಖ್ಯ, ಅಧಿಕಾರ ಹಿಡಿಯಲು ಮಾತ್ರ ಗಾಂಧಿ ತತ್ವಗಳು ಸೀಮಿತ. ಸಂಬಂಧವೇ ಇಲ್ಲದಿದ್ದರೂ ಹೆಸರಲ್ಲೇ ಗಾಂಧಿ ಎಂಬ ಪದ ಸೇರಿಸಿಕೊಂಡಿದ್ದಾರಲ್ಲಾ, ಇನ್ನು ತತ್ವಗಳನ್ನು ಕಟ್ಟಿಕೊಂಡು ಏನಾಗಬೇಕು? ಸಾಚಾಗಳಂತೆ ವರ್ತಿಸುವ ಕಾಂಗ್ರೆಸ್ಸಿಗರು ಗಾಂಧಿ ನೆನಪಿನಲ್ಲಿ ದೇಶಕ್ಕೆ ಉಪಯೋಗವಾಗುವ ಯೋಜನೆಗಳನ್ನು ನೀಡಿದ್ದಾರಾ? ಗಾಂಧಿಜಿ ಹೇಳುತ್ತಿದ್ದ ಸ್ವಚ್ಛತೆಗಾಗಿ ಜಾಗೃತಿ ಮೂಡಿಸುವುದಕ್ಕೂ 60 ವರ್ಷಗಳೇ ಬೇಕಾಯಿತು. ಅದೂ ಕಾಂಗ್ರೆಸ್ಸೇತರ ಪ್ರಧಾನಿಯಿಂದ. ರಾಜಕೀಯ ಕ್ಷೇತ್ರವನ್ನು ಕಲ್ಮಶಗೊಳಿಸಿದವರಿಂದ ಭಾರತವನ್ನು ಸ್ವಚ್ಛಗೊಳಿಸಲು ಹೇಗೆತಾನೇ ಸಾಧ್ಯ ಹೇಳಿ?
ತಾವಿದ್ದ ಕಾಂಗ್ರೆಸ್ ಪಕ್ಷ ದೇಶಕ್ಕೂ ತಮ್ಮ ತತ್ವ ಸಿದ್ಧಾಂತಗಳಿಗೂ ಮುಳುವಾಗುತ್ತದೆ ಎಂದು ಗಾಂಧಿಗೆ ಗೊತ್ತಿರಲಿಲ್ಲವೇ? ಪಾಕಿಸ್ತಾನದಿಂದ ಬಂದ ನಿರಾಶ್ರಿತ ಹಿಂದೂಗಳು ಗಾಂಧಿ ಬಳಿ ಅಳಲು ತೋಡಿಕೊಂಡಾಗ ನಿರಾಶ್ರಿತರ ಪರವಾಗಿ ಪ್ರಧಾನಿ ನೆಹರೂಗೆ ಅಪ್ಪಣೆ ಮಾಡುವ ಶಕ್ತಿಯನ್ನೂ ಕಳೆದುಕೊಂಡಿದ್ದರು. ಈ ವಿಷಯದಲ್ಲಿ ನೆಹರೂ ನಡೆದುಕೊಂಡ ರೀತಿಯಲ್ಲೇ ಗಾಂಧಿಗೆ ತಮ್ಮ ರಾಮರಾಜ್ಯದ ಕನಸನ್ನೂ ಸೇರಿಸಿ ಸಮಸ್ತ ತತ್ವಗಳಿಗೂ ಈ ಪಕ್ಷ ಕೊಳ್ಳಿ ಇಡಲಿದೆ ಎಂದು ಅರ್ಥವಾಗಬೇಕಿತ್ತು. ಒಂದು ವೇಳೆ ಅರ್ಥವಾಗಿದ್ದರೂ ಗಾಂಧಿ ಆ ವೇಳೆಗೆ ಏನೂ ಮಾಡಲಾಗದ ಸ್ಥಿತಿಗೆ ತಲುಪಿದ್ದರು. ಒಬ್ಬ ನಾಯಕನಿಂದ ಪ್ರಧಾನಿ ಹುದ್ದೆ ಗಿಟ್ಟಿಸಿಕೊಂಡ ಪಕ್ಷ ಆತ ಬದುಕಿದ್ದಾಗಲೇ ತನ್ನ ಗಾಡ್ ಫಾದರ್ ನ ತತ್ವಗಳಿಗೆ ತಿಲಾಂಜಲಿ ಅರ್ಪಿಸಿತ್ತು. ಆದರೂ ಶರೀರಕ್ಕೆ ಗುಂಡು ಹೊಡೆದ ವ್ಯಕ್ತಿಯನ್ನೇ ಮುಂದಿಟ್ಟುಕೊಂಡು ಸಂಸತ್ ನಲ್ಲಿ ರಾಜಕೀಯ ಮಾಡುತ್ತಾರೆ. ಕಾಂಗ್ರೆಸ್ ಹಾಗೂ ನೆಹರೂ ಕುಟುಂಬದ ಪ್ರತಿಯೊಂದು ನಡೆಯೂ ಗಾಂಧಿ ತತ್ವವನ್ನು ಕೊಲೆ ಮಾಡಿದೆ. ಭಾರತದ ಬಗ್ಗೆ ಭಾವನೆಗಳೇ ಇಲ್ಲದೇ ಹಿಂದೂವಾಗಿ ನನ್ನ ಹುಟ್ಟು ಆಕಸ್ಮಿಕ ಎಂದವರನ್ನು ವಿಪರೀತವಾಗಿ ತಲೆಮೇಲೆ ಕೂರಿಸಿಕೊಂಡಾಗ ತತ್ವಗಳನ್ನು ಬಲಿಕೊಡಬೇಕಾಗುತ್ತದೆ ಎಂಬುದಕ್ಕೆ ಗಾಂಧಿಗಿಂತಲೂ ಉತ್ತಮ ಉದಾಹರಣೆ ಬೇಕಿಲ್ಲ. ಗಾಂಧಿ ತತ್ವಗಳನ್ನು ಕಾಂಗ್ರೆಸ್ ಕೊಂದರೂ ಗೋಡ್ಸೆಯೇ ಗಾಂಧಿಯನ್ನು ಕೊಂದದ್ದು ಎಂದೆನಿಸುವುದು ಸಹಜ. ಕಾಂಗ್ರೆಸ್ ಗಾಂಧಿ ವಿಚಾರದಲ್ಲಿ ನಡೆದುಕೊಂಡಿದ್ದು ಅಧಿಕಾರಕ್ಕಾಗಿ, ಮತ ಗಳಿಸಲು ಬಳಸಿಕೊಂಡು ಎಸೆದದ್ದು ಎಲ್ಲದರ ಬಗ್ಗೆ ಅರಿವಿರುವವರು ಗೋಡ್ಸೆ ಮಾತ್ರ ಗಾಂಧಿಯನ್ನು ಕೊಂದ ಎನ್ನಲು ಸಾಧ್ಯವಿಲ್ಲ. ಗಾಂಧಿ ತತ್ವವನ್ನು ಕೊಂದಿದ್ದು ಕಾಂಗ್ರೆಸ್ ಎಂಬ ಸಾಕ್ಷಿಮಹಾರಾಜರ ಮಾತು ಸುಳ್ಳೆನ್ನಲು ಸಾಧ್ಯವಿಲ್ಲ.

Monday 1 December 2014

ಶರಿಯತ್ ಕೋರ್ಟ್ ಗಳಿಗೇ ಮಾನ್ಯತೆ ಇಲ್ಲ ಎಂದಾದ ಮೇಲೆ ಶರಿಯತ್ ಕಾನೂನಿನಡಿ ಮ್ಯುಚುಯಲ್ ಫಂಡ್ ಪ್ರಾರಂಭಿಸುವ ದರ್ದೇಕೆ?

ಈ ದೇಶದಲ್ಲಿ ಸಂವಿಧಾನಕ್ಕೆ ಪರ್ಯಾಯವಾದ ಮತ್ತೊಂದು ಕಾನೂನು ಚಾಲ್ತಿಯಲ್ಲಿದ್ದರೂ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ದೇಶದ ಭದ್ರತೆಗೇ ಅಪಾಯವೊಡ್ಡುವ ಸ್ಥಿತಿ ಎದುರಾದಾಗ ಮಾತ್ರ ಅದರ ಬಗ್ಗೆ ಎಚ್ಚೆತ್ತುಕೊಳ್ಳುತ್ತೇವೆ. ಇಲ್ಲದಿದ್ದರೆ ಪರ್ಯಾಯ ಕಾನೂನಿನ ಪ್ರಕಾರ ಏನು ನಡೆದರೂ ಪಿಳಿಪಿಳಿ ನೋಡುತ್ತಾ ಕುಳಿತುಬಿಡುತ್ತೇವೆ. ಈ ಮಾತನ್ನು ಈಗೇಕೆ ಹೇಳಬೇಕಾಗಿದೆ ಎಂದರೆ ಪ್ರತಿಯೊಂದರಲ್ಲೂ ಪ್ರತ್ಯೇಕತೆಯಲ್ಲೇ ಜೀವನ ನಡೆಸುತ್ತಿರುವ ಅಲ್ಪಸಂಖ್ಯಾತರಿಗೆ ಶರಿಯತ್ ಕಾನೂನಿನ ಪ್ರತ್ಯೇಕ ಮ್ಯುಚುಯಲ್ ಫಂಡ್ ಪ್ರಾರಂಭವಾಗಿರುವುದರಿಂದ.

ಅವರಿಗಾಗಿಯೇ ಪ್ರತ್ಯೇಕ ವಿವಾಹ ಕಾಯ್ದೆ, ಅವರಿಗಾಗಿಯೇ ಪ್ರತ್ಯೇಕ ಅಪರಾಧ ಕಾಯ್ದೆ, ಅವರಿಗಾಗಿಯೇ ಪ್ರತ್ಯೇಕ ಬ್ಯಾಂಕ್, ಅವರಿಗಾಗಿಯೇ ಪ್ರತ್ಯೇಕ ಪಕ್ಷ ಹೀಗೆ ಎಣಿಸುತ್ತಿದ್ದರೆ ಪ್ರತ್ಯೇಕತೆಯ ಪಟ್ಟಿ ಇನ್ನೂ ಬೆಳೆಯುತ್ತಲೇ ಹೋಗುತ್ತದೆ. ಪ್ರತಿಯೊಂದರಲ್ಲೂ ಪ್ರತ್ಯೇಕತೆ ಬಯಸುವವರು ಈಗ ಮ್ಯುಚುಯಲ್ ಫಂಡ್ ಗೆ ಬಂದಿದ್ದಾರೆ. ಅದೂ ಶರಿಯತ್ ಪ್ರಕಾರ ಮಾಡಬೇಕಂತೆ! ಅವರೇನು ಕೇಳಿಲ್ಲ ಬಾಂಧವರನ್ನು ಮೆಚ್ಚಿಸಲು ನಮ್ಮದೇ ಎಸ್.ಬಿ.ಐ ಹಮ್ಮಿಕೊಂಡಿರುವ ಹೊಸ ಯೋಜನೆ!

ಪ್ರತ್ಯೇಕ ದೇಶ ಬೇಕು ಎಂದರು ಕೊಟ್ಟದ್ದು ಆಯಿತು. ಪ್ರತ್ಯೇಕ ವಿವಾಹ ಕಾಯ್ದೆ ಎಂದರು ಅಲ್ಪಸಂಖ್ಯಾತರ ಮತ ಗಿಟ್ಟುತ್ತದೆ ಎಂದು ಏನೂ ಹೇಳದೇ ಮೌನವಾಗಿದ್ದಾಯಿತು. ಪ್ರತ್ಯೇಕ ರಾಜ್ಯದಲ್ಲೂ ತಮ್ಮದೇ ವಿಚಿತ್ರ ಕಾನೂನು-ಕಟ್ಟಲೆ ಬೇಕು ಎಂದರು ದೇಶದ ಪಂಡಿತ-ಮಹಾತ್ಮರು ಅದಕ್ಕೂ ಒಪ್ಪಿದರು. ಹೀಗೆಯೇ ಕೇಳುತ್ತಾ ಹೋದಂತೆಲ್ಲಾ ಇಲ್ಲ ಎನ್ನದೇ ಕೊಟ್ಟಾಯಿತು. ಕಾಲ ಬದಲಾದಂತೆ ಕೇಳದೆಯೂ ಓಲೈಸುವ ಪದ್ಧತಿ ಜಾರಿ ಬಂತು. ಕೊಡುತ್ತಾ ಹೋದಂತೆಲ್ಲಾ ಕಿರುಚುವುದು ಹೆಚ್ಚಾಯಿತೇ ಹೊರತು ಎಲ್ಲರಲ್ಲೂ ಒಂದಾಗುವ ಭಾವನೆ ಮೂಡಲಿಲ್ಲ. ತಾವೂ ಈದೇಶದ ಪ್ರಜೆಗಳು, ತಮಗೂ ಈ ದೇಶದ ಸಂವಿಧಾನಾತ್ಮಕ ಕಾನೂನುಗಳು ಅನ್ವಯವಾಗುತ್ತವೆ ಹೊರತು ಧರ್ಮದ ಚೌಕಟ್ಟಿನಲ್ಲಿರುವ ಕಾನೂನು ಅನ್ವಯಿಸುವುದಿಲ್ಲ ಎಂದು ಅವರಿಗೆ ಅನ್ನಿಸಲೇ ಇಲ್ಲ...!

ಈ ದೇಶದಲ್ಲಿ ಏನಾಗುತ್ತಿದೆ? ಇಂತಹದ್ದೊಂದು ಪ್ರಶ್ನೆ ಕೇಳಲೇಬೇಕಿದೆ. ಏಕೆಂದರೆ ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್ ಶರಿಯತ್ ಕೋರ್ಟ್ ಗಳ ಕುರಿತು ಮಹತ್ವದ ತೀರ್ಪನ್ನು ನೀಡಿತ್ತು. ಶರಿಯತ್ ’ಕೋರ್ಟ್’ ಗಳಿಗೆ ಕಾನೂನಿನ ಅಡಿಯಲ್ಲಿ ಮಾನ್ಯತೆಯೇ ಇಲ್ಲವೆಂಬುದು ಆ ತೀರ್ಪಿನ ಸಾರಾಂಶ. ಆದರೂ ಶರಿಯತ್ ಕಾನೂನಿನ ಪ್ರಕಾರ ಅಲ್ಪಸಂಖ್ಯಾತರಿಗೆ ಪ್ರತ್ಯೇಕ ಮ್ಯುಚುಯಲ್ ಫಂಡ್ ಪ್ರಾರಂಭಿಸಲಾಗುತ್ತಿದೆ.

ಶರಿಯತ್ ಕೋರ್ಟ್ ಗಳು ಹೊರಡಿಸುವ ಸೋ ಕಾಲ್ಡ್ ತೀರ್ಪುಗಳಿಂದ ರೋಸಿ ಹೋಗಿದ್ದ ಅದೆಷ್ಟೋ ಜನರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಪರಿಣಾಮ ದೇಶದ ಸಂವಿಧಾನಾತ್ಮಕ ಕಾನೂನಿಗೆ ಪರ್ಯಾಯವಾಗಿ ಕಾರ್ಯನಿರ್ವಹಿಸುತ್ತಿರುವ ಶರಿಯತ್ ಕೋರ್ಟ್ ಹಾಗೂ ಕೋರ್ಟ್ ಗಳು ವಿಧಿಸುವ ಫತ್ವಾಗಳಿಗೆ ಕಾನೂನು ಮಾನ್ಯತೆ ಇಲ್ಲವೆಂದು ಘಂಟಾಘೋಷವಾಗಿ ಸುಪ್ರೀಂ ತೀರ್ಪು ನೀಡಿದೆ. ಅದು ಫತ್ವಾಗೆ ಮಾತ್ರ ಸೀಮಿತವಾಗಿದ್ದರೆ ಸಮಸ್ಯೆ ಇರಲಿಲ್ಲ. ಆದರೆ ಸುಪ್ರೀಂ ಕೋರ್ಟ್ ಹೇಳಿರುವುದು ಶರಿಯತ್ ಕೋರ್ಟ್ ಗಳು ಹೊರಡಿಸುವ ಫತ್ವಾಗಳಿಗಲ್ಲ ಸಂಪೂರ್ಣ ಶರಿಯತ್ ಕೋರ್ಟ್ ಗಳಿಗೆ. ಶರಿಯತ್ ಕೋರ್ಟ್ ಗಳಿಗೆ ಕಾನೂನು ಮಾನ್ಯತೆ ಇಲ್ಲ ಎಂದಾದ ಮೇಲೂ ಅದಕ್ಕೆ ಅನುಗುಣವಾಗಿ ಕಾರ್ಯಕ್ರಮ ರೂಪಿಸುವುದಾದರೆ ಸ್ಥಳೀಯ ಪಂಚಾಯತ್ ಗಳು ಹೊರಡಿಸುವ ಕಾನೂನ ಪ್ರಕಾರವೂ ಇಂತಹ ಕಾರ್ಯಕ್ರಮಗಳನ್ನು ಜಾರಿಗೆ ತರಲು ಸಾಧ್ಯವೋ? ಪರಿಸ್ಥಿತಿ ಹೀಗಿರಬೇಕಾದರೆ ಕಾನೂನು ಮಾನ್ಯತೆಯೇ ಇಲ್ಲದ ಶರಿಯತ್ ಕಾನೂನಿನ ಪ್ರಕಾರ ಮ್ಯುಚುಯಲ್ ಫಂಡ್ ಪ್ರಾರಂಭಿಸುವುದರ ದರ್ದೇನು?.

ಶರಿಯತ್ ಕೋರ್ಟ್ ಗಳ ಮೇಲಿದ್ದ ಗಂಭೀರ ಆರೋಪವೇ ಪರ್ಯಾಯ ನ್ಯಾಯಾಂಗ ವ್ಯವಸ್ಥೆಯಂತೆ ವರ್ತಿಸುತ್ತಿದೆ ಎಂಬುದು. ಮ್ಯುಚುಯಲ್ ಫಂಡ್ ಎನ್ನುವುದು ಎಷ್ಟೇ ಖಾಸಗಿ ವಿಷಯವಾದರೂ ಅದು ದೇಶದ ಆರ್ಥಿಕತೆಗೆ ಸಂಬಂಧಿಸಿದ ಸೂಕ್ಷ್ಮ ವಿಷಯ. ಅಂಥದ್ದರಲ್ಲಿ ಭಾರತದ ನ್ಯಾಯಾಂಗಕ್ಕೆ ಪರ್ಯಾಯ ನ್ಯಾಯಾಂಗದಂತೆ ವರ್ತಿಸುತ್ತಿರುವ ಶರಿಯತ್ ಕೋರ್ಟ್ ಗಳಿಂದ ರಚಿತವಾದ ಕಾನೂನಿಗೆ ಅನುಗುಣವಾಗಿ ಮ್ಯುಚುಯಲ್ ಫಂಡ್ ಪ್ರಾರಂಭಿಸುವುದರಲ್ಲಿ ಅರ್ಥವಿದೆಯೇ?



ಇಷ್ಟಕ್ಕೂ ಎಸ್.ಬಿ.ಐ ಪ್ರಾರಂಭಿಸಿರುವ ಶರಿಯತ್ ಮ್ಯುಚುಯಲ್ ಫಂಡ್ ಯೋಜನೆ ಹೆಸರೇ ಹೇಳುವಂತೆ ಶರಿಯತ್ ಸಲಹಾ ಮಂಡಳಿಯ ಅಧೀನಕ್ಕೆ ಒಳಪಟ್ಟಿರುತ್ತದೆ.. ಅದರ ನಿರ್ವಹಣೆ ಶರಿಯತ್ ಕೋರ್ಟ್ ಗಳಲ್ಲಿರುವವರ ಅಣತಿಯಂತೆಯೇ ನಡೆಯಲಿದೆ. ಶರಿಯತ್ ಕೋರ್ಟ್ ಗಳು ಅಥವಾ ಧಾರ್ಮಿಕ ಮುಖಂಡರು ಅನುಮತಿ ನೀಡುವ ಕಂಪನಿಗಳಲ್ಲಿ ಮಾತ್ರ ಹೂಡಿಕೆ ಮಾಡಲು ಅವಕಾಶವಿರುತ್ತದೆ. ಹೂಡಿಕೆ ಮಾಡಿದ ನಂತರವೂ ಅದನ್ನು ಬಳಸುವುದಕ್ಕೂ ನಿಬಂಧನೆಗಳೂ ಇಲ್ಲದೇ ಇರಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಮ್ಯುಚುಯಲ್ ಫಂಡ್ ನ ಹಣ ಯಾವುದಕ್ಕೂ ಬಳಕೆಯಾಗುವ ಸಾಧ್ಯತೆ ಇದೆ ಅಲ್ಲವೇ? ಇಸ್ಲಾಂ ನಲ್ಲಿ ಬಡ್ಡಿ ತೆಗೆದುಕೊಳ್ಳುವುದು, ಮದ್ಯ ವ್ಯಾಪಾರಕ್ಕೆ ಸಂಬಂಧಿಸಿದ್ದೇ ಮೊದಲಾದ ವ್ಯವಹಾರಗಳಲ್ಲಿ ಹೂಡಿಕೆ ಮಾಡುವುದನ್ನು ನಿಷೇಧಿಸಲಾಗಿದೆ. ಇಂತಹ ಕೆಲವೊಂದು ವಿಷಯಗಳು ಸಮಾಜಕ್ಕೆ ಒಳಿತೆಂದೇ ಕಂಡರೂ, ಸರ್ಕಾರಿ ಸ್ವಾಮ್ಯದ ಇಡಿಯ ಒಂದು ಯೋಜನೆಯನ್ನು ಶರಿಯತ್ ಕಾನೂನಿನ ಆಧಾರದಲ್ಲಿ ರೂಪಿಸುವುದು ಪಾನ್ ಇಸ್ಲಾಂ, ಇಸ್ಲಾಂ ಬ್ರದರ್ ಹುಡ್ ಹೆಸರಿನಲ್ಲಿ ನಡೆಯುವ ಅದೆಷ್ಟೋ ವಿಚಾರಗಳ ದೃಷ್ಠಿಯಿಂದ ಭಾರತದ ಸಂವಿಧಾನಕ್ಕೆ ವಿರೋಧಿಯಾಗುವುದಿಲ್ಲ ಎಂಬುದಕ್ಕೆ ಖಾತ್ರಿ ಏನು?
ಧಾರ್ಮಿಕ ಸಂಘರ್ಷದಲ್ಲಿ ಇಸ್ಲಾಂ ನ ತೀವ್ರತೆಯನ್ನು ನೆನಪಿಸುವ ಇರಾಕ್ ನ ಐ.ಎಸ್.ಐ.ಎಸ್ ಸಂಘಟನೆಯ ಕಣ್ಣಮುಂದೆಯೇ ಇದೆ. ಇರಾಕ್ ನಲ್ಲಿ ತಮ್ಮದೇ ಕರೆನ್ಸಿ ಜಾರಿಗೆ ತರುವ ಮಟ್ಟಿಗೆ ವ್ಯವಸ್ಥೆಗೆ ಸೆಡ್ಡು ಹೊಡೆದು ಸದ್ದಿಲ್ಲದೇ ಹೇಗೆ ಪರ್ಯಾಯ ವ್ಯವಸ್ಥೆ ರೂಪಿಸುತ್ತಾರೆ ಎಂಬುದೂ ನಮಗೆ ಚೆನ್ನಾಗಿ ತಿಳಿದಿದೆ. ಇವೆಲ್ಲದ್ದೂ ಪಾನ್ ಇಸ್ಲಾಂ, ಅಥವಾ ಇಸ್ಲಾಂ ಬ್ರದರ್ ಹುಡ್ ಪರಿಣಾಮ ಬೀರಿದೆ ಎಂಬುದೂ ಪ್ರಮುಖ ಪ್ರಶ್ನೆಯಾಗಲಿವೆ.

ಇಸ್ಲಾಮ್ ಬ್ರದರ್ ಹುಡ್ ನ್ನು ವ್ಯಾಖ್ಯಾನಿಸಲು ಇರಾಕ್ ನ ಐ.ಎಸ್.ಐ.ಎಸ್ ನಿಂದ ಭಾರತಕ್ಕೆ ವಾಪಸ್ಸಾದ ಮುಂಬೈ ನ ಯುವಕನ ಪ್ರಕರಣ, ಜಮ್ಮು-ಕಾಶ್ಮೀರದಲ್ಲಿ ಐ.ಎಸ್.ಐ.ಎಸ್ ಧ್ವಜ ಹಾರಿಸಿದ್ದು, ತಮಿಳುನಾಡಿನಲ್ಲಿ ಟೀ ಶರ್ಟ್ ಗಳ ಮೇಲೆ ಧ್ವಜ ಇಸೀಸ್ ಧ್ವಜ ಪ್ರಿಂಟ್ ಆದಕ್ಕಿಂತ ಮತ್ತೊಂದು ಉದಾಹರಣೆ ಬೇಕಿಲ್ಲ. ಒಂದು ವೇಳೆ ಶರಿಯತ್ ಕೋರ್ಟ್ ನ ನಾನೂನು ಪ್ರಕಾರ ಸರ್ಕಾರಿ ಸ್ವಾಮ್ಯದ ಸಂಸ್ಥೆಯ ಒಂದು ಯೋಜನೆಯೇ ಜಾರಿಗೆ ಬರುತ್ತದೆ ಎಂದಾರೆ ಅದೇ ಶರಿಯತ್ ಕೋರ್ಟ್ ಧರ್ಮದ ನೆಲೆಗಟ್ಟಿನಲ್ಲಿ ಒಪ್ಪುವ ಜಿಹಾದ್, ಭಯೋತ್ಪಾದನೆ, ಒಂದಕ್ಕಿಂತ ಹೆಚ್ಚು ಮದುವೆಯಂತಹ ವಿಷಯಗಳನ್ನೂ ಕಾನೂನು ಬದ್ಧ ಮಾಡಬೇಕಾಗುತ್ತದೆ. ಹಾಗೆ ಮಾಡಲು ಸಾಧ್ಯವೇ? ಅದು ಸಾಧ್ಯವಿಲ್ಲ ಎಂದರೆ ಶರಿಯತ್ ಕಾನೂನಿನ ಪ್ರಕಾರ ಮ್ಯುಚುಯಲ್ ಫಂಡ್ ಪ್ರಾರಂಭಿಸಲು ಹೇಗೆ ಸಾಧ್ಯ?
ನೆನಪಿರಲಿ, ಮುಂಬೈ ದಾಳಿಯ ರುವಾರಿ, ಹಫೀಜ್ ಸಯ್ಯದ್, ಇದೇ ದಾಳಿಯಲ್ಲಿ ಅಪರಾಧ ಸಾಬೀತಾಗಿ ಗಲ್ಲಿಗೇರಿದ್ದ ಅಜ್ಮಲ್ ಕಸಬ್ ಅವರನ್ನು ಸಮರ್ಥಿಸಿಕೊಳ್ಳುತ್ತಿರುವುದೂ ಇದೇ ಧಾರ್ಮಿಕ ಚೌಕಟ್ಟು. ಏಕೆಂದರೆ ಅವರು ಧರ್ಮಕ್ಕಾಗಿ ಹೋರಾಟ ನಡೆಸಿ ವೀರಮರಣವನ್ನಪ್ಪಿದ್ದಾರೆ. ತನ್ನ ಧರ್ಮವನ್ನು ಬೆಳೆಸುವುದಕ್ಕೆ ಹೋರಾಡುವುದು ಧಾರ್ಮಿಕ ಕಾನೂನಿನಲ್ಲಿ ಪ್ರತಿಷ್ಠೆಯ ಪ್ರಶ್ನೆ. ಭಯೋತ್ಪಾದನೆ, ಧರ್ಮದ ಹೆಸರಿನಲ್ಲಿ ಇಂತಹ ಕೃತ್ಯಗಳನ್ನು ಭಾರತೀಯ ಮುಸ್ಲಿಮರು ಒಪ್ಪುವುದಿಲ್ಲ ಎಂದು ಸಮರ್ಥನೆ ನೀಡಬಹುದು ಆದರೆ ಭಾರತೀಯ ಮುಸ್ಲಿಮರು ಶರಿಯತ್ ನ್ನು ಒಪ್ಪುವುದಿಲ್ಲ ಎಂದು ಮಾತ್ರ ಹೇಳಲು ಸಾಧ್ಯವಿಲ್ಲ. ಶರಿಯತ್ ಕಾನೂನಿನಲ್ಲಿ ನಿಷೇಧಿಸುವ ಅಂಶಗಳನ್ನು ಹೊರತುಪಡಿಸಿ ಹಾಗೆಯೂ ಓರ್ವ ವ್ಯಕ್ತಿ ಹೂಡಿಕೆ ಮಾಡಬಹುದು. ಅದಕ್ಕೆ ಪ್ರತ್ಯೇಕ ಕಾನೂನು ಇರುವ ಮ್ಯೂಚುಯಲ್ ಫಂಡ್ ಅಗತ್ಯವೇನು?
ಒಂದು ಸರ್ವೇ ಪ್ರಕಾರ, ಜಾಗತಿಕ ಮಟ್ಟದಲ್ಲಿ ಇಸ್ಲಾಮಿಕ್ ಬ್ಯಾಂಕ್ ಗಳ ಆಸ್ತಿ ಒಟ್ಟು 1.8ಟ್ರಿಲಿಯನ್ ಡಾಲರ್ ನಷ್ಟಿದೆ. ಅಂದರೆ ಬರೊಬ್ಬರಿ 112 ಲಕ್ಷ ಕೋಟಿಯಷ್ಟಿದೆ. ಬೆಂಗಳೂರಿನ ಗ್ರಾಮಾಂತರ ಪ್ರದೇಶದ ಓರ್ವ ಮುಸ್ಲಿಮನಿಗೆ ತೊಂದರೆಯಾದರೆ ಅರಬ್ ರಾಷ್ಟ್ರದಲ್ಲಿರುವ ಮತ್ಯಾರೋ ವ್ಯಕ್ತಿ ಸಹಾಯಕ್ಕೆ ಧಾವಿಸುತ್ತಾರೆ. ಇದನ್ನು ತಪ್ಪು ಎಂದು ಹೇಳಲಾಗದು, ಆದರೆ ಒಂದು ವೇಳೆ ವಿದೇಶಿ ಮುಸ್ಲಿಮರು ಮ್ಯುಚುಯಲ್ ಫಂಡ್ ಗೆ ಹಣ ನೀಡಿ ಸದ್ದಿಲ್ಲದೇ ಆಡಳಿತ, ಆರ್ಥಿಕತೆಯ ಮೇಲೆ ಹಿಡಿದ ಸಾಧಿಸುವ ಹುನ್ನಾರವಿದ್ದರೆ ಈ ಶರಿಯತ್ ಕಾನೂನಿನ ಅಡಿ ಪ್ರಾರಂಭವಾಗುವ ಮ್ಯುಚುಯಲ್ ಫಂಡ್ ನಿಂದ ದೇಶದ ಭದ್ರತೆಗೇ ಅಪಾಯ ಎಂಬುದು ನಮಗೇಕೆ ಅರ್ಥವಾಗುತ್ತಿಲ್ಲ. ಇಷ್ಟೆಲ್ಲಾ ಇದ್ದರೂ ಶರಿಯತ್ ಕಾನೂನಿನ ಪ್ರಕಾರ ಮ್ಯುಚುಯಲ್ ಫಂಡ್ ಪ್ರಾರಂಭಿಸಿದರೆ ಮುಂದೊಮ್ಮೆ ಭಾರತದ ಸಮಸ್ತ ಆರ್ಥಿಕತೆಯನ್ನು ಷರಿಯತ್ ಆಳುವುದಿಲ್ಲ ಎಂದು ನಂಬುವುದಾದರೂ ಹೇಗೆ? ಸರಿ ಎಲ್ಲವೂ ಸುಸೂತ್ರವಾಗಿಯೇ ನಡೆಯುತ್ತದೆ. ಒಂದು ವೇಳೆ ಶರಿಯತ್ ಕಾನೂನಿಗೆ ವಿರುದ್ಧವಾಗಿ ಹೂಡಿಕೆ ಮಾಡಿದಲ್ಲಿ ಆತನ ವಿರುದ್ಧ ಫತ್ವಾ ಹೊರಡಿಸಲಾಗುತ್ತದೆ ಎಂಬ ಅಂಶವೂ ಇದೆ. ಹಾಗಾದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿಗೆ ಬೆಲೆ ಏನು?

ಇಷ್ಟಕ್ಕೂ ಶರಿಯತ್ ಕಾನೂನಿನಡಿಯಲ್ಲಿ ಮ್ಯುಚುಯಲ್ ಫಂಡ್ ಪ್ರಾರಂಭಿಸುವಂತಹ ಘನ ಕಾರ್ಯ ಮಾಡಲು ಹೊರಟಿರುವ ಎಸ್.ಬಿ.ಐ ನೀಡುರುವ ಸ್ಪಷ್ಟನೆಯಾದರೂ ಏನು? " ಭಾರತದ ಮುಸ್ಲಿಂ ಜನಸಂಖ್ಯೆಯಲ್ಲಿ ಬಹುತೇಕರು ಬ್ಯಾಂಕಿಂಗ್ ವ್ಯವಸ್ಥೆಯಿಂದ ದೂರ ಉಳಿದಿದ್ದಾರೆ" ಏಕೆಂದರೆ ಇಸ್ಲಾಂ ನ ಕಾನೂನು ಬಡ್ಡಿ ತೆಗೆದುಕೊಳ್ಳುವುದನ್ನು ನಿಷೇಧಿಸಿದೆ. ಆದ್ದರಿಂದ ಶರಿಯತ್ ಕೋರ್ಟ್ ಕಾನೂನಿನ ಪ್ರಕಾರವೇ ಮ್ಯುಚುಯಲ್ ಫಂಡ್ ನ ನಿಯಮಗಳನ್ನೇ ಬದಲಿಸಿಬಿಟ್ಟರೆ ಬಾಂಧವರನ್ನು ಮೆಚ್ಚಿಸಬಹುದು. ಇಸ್ಲಾಂ ಧಾರ್ಮಿಕ ಕಾನೂನಿನ ಪ್ರಕಾರ ಕಾಫಿರರು ಬದುಕಿರಲೇಬಾರದೆಂಬ ಕಾನೂನಿದೆ ಹಾಗಿದ್ದರೆ ಭಾರತದಲ್ಲಿರುವ ಮುಸ್ಲಿಮೇತರರನ್ನು ಕೊಂದುಬಿಡಬಹುದೇ?

ಮ್ಯುಚುಯಲ್ ಫಂಡ್ ಯೋಜನೆ ರೂಪಿಸಿದ ಮಹಾನುಭಾವರು ಯೋಚಿಸಲೇಬೇಕಾದ ಪ್ರಮುಖ ಅಂಶವಿದು. ಭಾರತದ ಮುಸ್ಲಿಂ ಜನಸಂಖ್ಯೆಯಲ್ಲಿ ಬ್ಯಾಂಕಿಂಗ್ ನಿಂದ ದೂರ ಉಳಿದವರನ್ನು ಬ್ಯಾಂಕ್ ವ್ಯವಸ್ಥೆಯೊಂದಿಗೆ ಜೋಡಿಸಲು ಇರುವುದು ಇದೊಂದೇ ಮಾರ್ಗವೇ? ಹಾಗಿದ್ದರೆ ಪ್ರಧಾನಿ ಇತ್ತೀಚೆಗಷ್ಟೇ ಚಾಲನೆ ನೀಡಿದ್ದ ಜನ್ ಧನ್ ಯೋಜನೆ ಯಾವ ಪುರುಷಾರ್ಥಕ್ಕೆ? ಜನ್-ಧನ್ ಯೋಜನೆಗೂ ಕೂಡ ಮುಸ್ಲಿಂ ಸಮುದಾಯದವರನ್ನು ಬ್ಯಾಂಕ್ ನೊಂದಿಗೆ ಜೋಡಿಸಲು ಸಾಧ್ಯವಾಗಿಲ್ಲ ಎಂದರೆ ಮುಸ್ಲಿಮರು ಭಾರತ ಸರ್ಕಾರದ ಯೋಜನೆಗಳನ್ನು ಧಿಕ್ಕರಿಸುತ್ತಿರಬೇಕು. ಇಲ್ಲ ಆ ಯೋಜನೆಗಳಿಗೆ ಮುಸ್ಲಿಂ ಸಮುದಾಯದವರನ್ನು ತಲುಪಲು ಸಾಧ್ಯವಾಗದೇ ಇರಬೇಕು. ಇದರಲ್ಲಿ ಯಾವುದು ಸತ್ಯ?

ಪ್ರತಿಯೊಂದೂ ಶರಿಯತ್ ನಂತೆಯೇ ನಡೆಯಬೇಕು ಎಂದಿದ್ದರೆ ಅದಕ್ಕಾಗಿಯೇ ಪಾಕಿಸ್ತಾನದಂತಹ ಪ್ರತ್ಯೇಕ ರಾಷ್ಟ್ರಗಳಿವೆ ಅಲ್ಲಿ ಮುಂದುವರೆಸಲಿ. ಆದರೆ ಭಾರತದ ಪ್ರಜಾಪ್ರಭುತ್ವವನ್ನು ಒಪ್ಪಿಯೂ, ಇಲ್ಲಿನ ಕಾನೂನನ್ನು ತಿರಸ್ಕರಿಸಿ ತಮ್ಮದೇ ಮತ್ತೊಂದು ಕಾನೂನು ಬೇಕೆಂದು ಪಟ್ಟುಹಿಡಿಯುವವರು ದೇಶಧ್ರೋಹಿಗಳಲ್ಲದೇ ಮತ್ತೇನು? ಎಲ್ಲರಿಗೂ ಒಂದೇ ಕಾನೂನು, ಏಕ್ ಭಾರತ್ ಶ್ರೇಷ್ಠ್ ಭಾರತ್ ಎಂದು ಇಡೀ ದೇಶವೇ ಒಂದಾಗಿರಲು ಬಯಸುತ್ತಿದ್ದರೆ ಅಧಿಕಾರಿ ವರ್ಗದಲ್ಲೇ ಶರಿಯತ್ ಕಾನೂನು, ಫತ್ವಾ ಗಳಿಗೆ ಅನುಗುಣವಾಗಿ ಯೋಜನೆ, ಕಾರ್ಯಕ್ರಮ, ಮ್ಯುಚುಯಲ್ ಫಂಡ್ ಇತ್ಯಾದಿಗಳನ್ನು ಪ್ರಾರಂಭಿಸುವ ಭಯಂಕರ ಆಲೋಚನೆ ಮೂಡಿದರೆ ಭಾರತ ಶ್ರೇಷ್ಠವಾಗಬಹುದೇನೋ ಗೊತ್ತಿಲ್ಲ. ಆದರೆ ಏಕ್ ಭಾರತ್ ಶ್ರೇಷ್ಠ್ ಭಾರತ್ ಆಗುವುದಕ್ಕಂತೂ ಸಾಧ್ಯವಿಲ್ಲ. ಹಾಗೂ ಭಾರತವನ್ನು ಏಕ್ ಎಂದು ಹೇಳುವ ಅವಕಾಶವೂ ಉಳಿಯುವುದಿಲ್ಲ! ಎಚ್ಚರ