Monday 24 November 2014

ಜಾಗತೀಕರಣದತ್ತ ಹೊರಳಿದ ಹಿಂದುತ್ವ: ಅಲುಗಾಡುತ್ತಿದೆ 'ಸೆಕ್ಯುಲರ್'ಗಳ ಅಸ್ಥಿತ್ವ!

ಅಷ್ಟಾಂಗ ಯೋಗ ಈಗಲೂ ಪ್ರಪಂಚದಲ್ಲಿ ಒಂದು ಪವಾಡ ಎಂಬಂತೆಯೇ ಅನಿಸುತ್ತದೆ. ಯೋಗವಿಲ್ಲದೇ ಯೋಗಿಗಳಿಲ್ಲ. ಯೋಗಿಗಳಿಲ್ಲದೇ ಭಾರತದ ವರ್ಣನೆ ಸಾಧ್ಯವಿಲ್ಲ. ಭಾರತದ ಆತ್ಮದಂತಿರುವ ಅನೇಕ ಸನ್ಯಾಸಿಗಳ ಬಿರುದಾವಳಿಗಳಲ್ಲಿ ಇಂದಿಗೂ ಅಷ್ಟಾಂಗ ಯೋಗದ ಉಲ್ಲೇಖವಿದೆ. ಯೋಗದ ಮೂಲಕವೇ ಆಧ್ಯಾತ್ಮ ಸಾಧನೆಯೂ ಸಾಧ್ಯ. ಯೋಗಕ್ಕೂ ಆಧ್ಯಾತ್ಮಕ್ಕೂ ಅಂಥದ್ದೊಂದು ನಂಟಿದೆ
.

ಪಾಶ್ಚಾತ್ಯ ಕನ್ನಡಕವನ್ನು ಧರಿಸಿ ಯೋಗ ಎಂಬುದನ್ನು ಕೇವಲ ಆರೋಗ್ಯ ಸುಧಾರಣೆಗೆ ಮಾತ್ರ ಸೀಮಿತಗೊಳಿಸದೇ, ಭಾರತೀಯತೆ ದೃಷ್ಟಿಯಿಂದ ನೋಡಿದರೆ, ಯೋಗದ ಗುರಿ ಇರುವುದು ಮೋಕ್ಷ ಸಾಧನೆಯತ್ತ. ಭಾರತೀಯ ತತ್ವಜ್ಞಾನದ ಪ್ರಕಾರ, ಸಾಂಖ್ಯ ದರ್ಶನ, ಯೋಗ ದರ್ಶನ, ನ್ಯಾಯ ದರ್ಶನ, ವೈಶೇಷಿಕ ದರ್ಶನ, ಮೀಮಾಂಸ ದರ್ಶನ, ವೇದಾಂತ ದರ್ಶನ ಎಂಬ ಆರು ಸಾಂಪ್ರದಾಯಿಕ ಶಾಖೆ(ಷಡ್ದರ್ಶನ)ಗಳಲ್ಲಿ ಯೋಗವೂ ಒಂದು. ಹೀಗೆ ಯೋಗ, ವೇದಗಳ, ಆಧ್ಯಾತ್ಮದ ತಳಹದಿಯಲ್ಲೇ ನಿರ್ಮಾಣಗೊಂಡಿದೆ. ಯೋಗ  ಭಾರತಕ್ಕೆ ಅನೇಕ ಮಹಾತ್ಮರನ್ನು ನೀಡಿದೆ. ಆದರೆ  ವೇದಗಳೆಂದರೆ ಕಾರಣವೇ ಇಲ್ಲದೇ ಕಿರುಚುವ ಕೆಲ ವರ್ಗಗಳೂ ಸ್ವಾಭಾವಿಕವಾಗಿಯೇ ಯೋಗವನ್ನೂ ವಿರೋಧಿಸುತ್ತವೆ.

ಮದರಸಾಗಳಲ್ಲಿ ಬಾಂಬ್ ತಯಾರು ಮಾಡುವ ಶಿಕ್ಷಣವನ್ನು ಉತ್ತೇಜಿಸುವವರು. ಶಾಲೆಗಳಲ್ಲಿ ಯೋಗ ಶಿಕ್ಷಣವನ್ನು ಕಡ್ಡಾಯಗೊಳಿಸಿದರೆ ಬೀದಿಗೆ ಇಳಿಯುತ್ತಾರೆ. 2013ರಲ್ಲಿಯೂ ಹೀಗೆಯೇ ಆಗಿತ್ತು. ವಿದ್ಯಾರ್ಥಿಗಳಿಗೆ ಉತ್ತಮ ಆರೋಗ್ಯ ನೀಡುವ ಉದ್ದೇಶದಿಂದ ಅಲ್ಲಿನ ಸರ್ಕಾರ ಮಧ್ಯಪ್ರದೇಶದ ಶಾಲೆಗಳಲ್ಲಿ ಒಂದನೇ ತರಗತಿಯಿಂದ 5 ತರಗತಿ ವರೆಗೆ ಯೋಗ ಶಿಕ್ಷವಣವನ್ನು ಕಡ್ಡಾಯಗೊಳಿಸಲಾಗಿತ್ತು. ಇದಕ್ಕಾಗಿ ಯೋಗ ಪರಿಷತ್ ನ್ನೂ ಸ್ಥಾಪಿಸಲಾಗಿತ್ತು. ಯೋಗದ ಹೆಸರು ಕೇಳಿದರೆ ಆರೋಗ್ಯ ಹದಗೆಡಿಸಿಕೊಳ್ಳುವ ಸೆಕ್ಯುಲರ್ ಖ್ಯಾತಿಯ ಬಾಂಧವರು ಬೀದಿಗಿಳಿದರು. ಮತ್ತದೇ ಪ್ರತಿಭಟನೆ. ಕೇಸರೀಕರಣದ ಶಿಕ್ಷಣ ಪದ್ಧತಿಯನ್ನು ಹೇರಲಾಗುತ್ತಿದೆ ಎಂದು ಎದೆ ಬಡಿದುಕೊಂಡು ಅತ್ತರು. ಈ ಬಾಂಧವರಿಗೆ ಒಂದಷ್ಟು ಜಾತ್ಯಾತೀತ ಸಂಘಟನೆಗಳೂ ಬೆಂಬಲಿಸಿ ಪ್ರತಿಭಟನೆ ನಡೆಸಿದವು. ಇಷ್ಟಕ್ಕೇ ಸುಮ್ಮನಾಗಲಿಲ್ಲ. ಬದಲಾಗಿ ಯೋಗ ಶಿಕ್ಷಣದ ಹೆಸರಿನಲ್ಲಿ ಕೇಸರೀಕರಣ ಮಾಡುತ್ತಿರುವ ಸರ್ಕಾರದ ವಿರುದ್ಧ  ಸುಪ್ರೀಂ ಕೋರ್ಟ್ ಗೆ ದೂರು ನೀಡುವುದಾಗಿ ಎಚ್ಚರಿಕೆ ನೀಡಿದರು.

ರಾಷ್ಟ್ರೀಯ ಆಸ್ತಿಯಾಗಿರುವ ಯೋಗ ಶಿಕ್ಷಣ ಸದ್ಯಕ್ಕೆ ಕೋಮುವಾದ ಹಣೆಪಟ್ಟಿಹೊತ್ತಿದೆ. ಕೋಮುವಾದ ಬಿತ್ತುವವರ ಆಸ್ತಿಯಾಗಿ ಮಾರ್ಪಾಡಾಗಿದೆ. ವಿಪರ್ಯಾಸವೆಂದರೆ, ಪ್ರಪಂಚದಲ್ಲಿರುವ 130 ದೇಶಗಳು ಕೋಮುವಾದಿಗಳ ಆಸ್ತಿಯನ್ನು ವೃದ್ಧಿಗೊಳಿಸಲು ಕೈಜೋಡಿಸಿವೆ!.... ಅರ್ಥಾತ್ 130( ಈ ಲೇಖನ ಪ್ರಕಟವಾಗುವ ವೇಳೆ ಮತ್ತಷ್ಟು ರಾಷ್ಟ್ರಗಳು ಸೇರಬಹುದು) ರಾಷ್ಟ್ರಗಳ ಜನರೂ ಕೋಮುವಾದಿಗಳಾಗಲು ತುದಿಗಾಲಲ್ಲಿ ನಿಂತಿದ್ದಾರೆ! ಆದರೆ ಸೆಕ್ಯುಲರ್ ಭಾರತದಲ್ಲಿ ಯೋಗವನ್ನು ವಿಪರೀತವಾಗಿ ಹೀಗಳೆಯುವುದು ಮುಂದುವರೆದಿದೆ.

ಯೋಗ ಶಿಕ್ಷಣವನ್ನು ಕಡ್ಡಾಯಗೊಳಿಸುವ ಸಂಬಂಧ ಇತ್ತೀಚಿನ ತಿಂಗಳಲ್ಲಿ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಗಳ ಅಭಿಪ್ರಾಯ ಸಂಗ್ರಹಣೆಗೆ ಮುಂದಾಗಿತ್ತು. ಯೋಗ ಶಾಲೆಗಳಲ್ಲಿ ಹೇಳಿಕೊಡಬೇಕೋ ಬೇಡವೋ ಎಂಬ ಚರ್ಚೆ ನಡೆಯುತ್ತಿರುವಾಗಲೇ ಮುಂದುವರಿದ ರಾಷ್ಟ್ರ ಅತ್ಯಂತ ವೈಜ್ನಾನಿಕವಾಗಿ ಮುನ್ನಡೆಯುತ್ತಿರುವ ಅಮೆರಿಕ ನಾಗರಿಕರು ಸಹ ಕೆಲಸದ ಒತ್ತಡ ತಡೆಯಲಾರದೇ ಯೋಗದ ಮೊರೆ ಹೋಗಲಾರಂಭಿಸಿದ್ದರು. ಅಮೇರಿಕಾ ಆದರೆ ಏನಂತೆ ಅಲ್ಲಿ ನಮ್ಮ ಬುದ್ದಿಜೀವಿಗಳ ಸ್ನೇಹಿತರು, ಸಂಬಂಧಿಗಳು ಇರಬಾರಬೆಂಬ ಕಾನೂನು ಇದೆಯೇ? ಅಮೆರಿಕಾದಂತಹ ಸಿಟಿಯಲ್ಲೇ ಭಾರತದ ಯೋಗ ಶಿಕ್ಷಣ ಸದ್ದು ಮಾಡಲು ಪ್ರಾರಂಭಿಸಿದಾಗ ಜಾಗತಿಕ ಮಟ್ಟದಲ್ಲಿ ಸೆಕ್ಯುಲರ್ ಪಡೆ ಜಾಗೃತವಾಯಿತು. ಅಲ್ಲಿನ ಕೋರ್ಟ್ ಬಾಗಿಲನ್ನೂ ಬಡಿದು ಯೋಗ ಶಿಕ್ಷಣ, ಸೂರ್ಯ ನಮಸ್ಕಾರದಂತಹ ಸಂಸ್ಕಾರಗಳು ನಮ್ಮನ್ನು ಕೋಮುವಾದಿಗಳನ್ನಾಗಿ ಮಾಡುತ್ತಿದೆ ಎಂದು ಆರೋಪಿಸಲಾಯಿತು. ಆದರೆ ಅಲ್ಲಿ ಇವರ ವಾದಕ್ಕೆ ಕವಡೆ ಕಾಸಿನ ಕಿಮ್ಮತ್ತು ದೊರೆಯಲಿಲ್ಲ. ಯೋಗ ಶಿಕ್ಷಣ ನಿರ್ದಿಷ್ಟ ಧರ್ಮದ ಬೋಧನೆಯಾಗುವುದಿಲ್ಲ ಎಂಬ ಆದೇಶ ಹೊರಬಿದ್ದ ನಂತರವೇ ಭಾರತದ ನ್ಯಾಯಾಲಯಗಳಿಗೆ ಜ್ನಾನೋದಯವಾಗಿ ಅಲ್ಲೂ ಅದೇ ಪ್ರಶ್ನೆ ಕಾಡತೊಡಗಿತ್ತು.

ಆದರೂ ಸುಪ್ರೀಂ ಕೋರ್ಟ್, ಸಂಪೂರ್ಣವಾಗಿ ಯೋಗ ಶಿಕ್ಷಣ ಅಗತ್ಯವಿದೆ ಎಂದು ಹೇಳಲಿಲ್ಲ!. ಸುಪ್ರೀಂ ಕೋರ್ಟ್ ನ ಹೇಳಿಕೆಯೊಂದು ಹೀಗಿದೆ. ಕೆಲ ಅಲ್ಪಸಂಖ್ಯಾತ ಶಾಲೆಗಳು ಯೋಗಕ್ಕೆ ವಿರುದ್ಧವಾಗಿರಬೇಕಾದರೆ ಎಲ್ಲಾ ಶಾಲೆಗಳಲ್ಲೂ ಅದನ್ನು ಹೇಗೆ ಕಡ್ಡಾಯಗೊಳಿಸಲು ಸಾಧ್ಯ? ನಮಗೆ ಯೋಗ ಶಿಕ್ಷಣ ಬೇಕಿಲ್ಲ ಎಂದು ಅಲ್ಪಸಂಖ್ಯಾತ ಶಾಲೆಗಳು ಹೇಳಿದರೆ ಹೇಗೆ ತಾನೆ ಕಡ್ಡಾಯಗೊಳಿಸಬಹುದು ಎಂದು ಪ್ರಶ್ನಿಸಿದೆ. ಇಷ್ಟಕ್ಕೇ ನಿಂತಿಲ್ಲ. ಮತ್ತೊಂದು ಹೇಳಿಕೆಯಲ್ಲಿ, ಯೋಗದ ಪ್ರಸ್ತುತತೆ ನಮಗೆ ಅರ್ಥವಾಗುತ್ತದೆ. ಆದರೆ ಅದನ್ನು ಕಡ್ದಾಯ ಮಾಡಿ ಎಂದು ಹೇಳಲು ಸಾಧ್ಯವಿಲ್ಲ ಎಂದು ಹೇಳಿತ್ತು. ಸುಪ್ರೀಂ ಕೋರ್ಟ್ ನ ಈ ಅಭಿಪ್ರಾಯಕ್ಕಿಂತಲೂ ಅಮೆರಿಕ ಕೋರ್ಟ್ ಆದೇಶವೇ ಉತ್ತಮವಾಗಿತ್ತು ಎಂದನಿಸದಿರದು. ಅಥವಾ ಅದಕ್ಕಿಂತಲೂ ಭಿನ್ನವಲ್ಲ. ಏಕೆಂದರೆ ಅಮೆರಿಕಾ ದೇಶಕ್ಕೆ ಯೋಗ ಶಿಕ್ಷಣವೆಂಬುದು ಒಂದು ವಿದೇಶಿ ಕಲೆ, ಅದನ್ನು ಇಚ್ಛೆ ಇದ್ದವರು ಕಲಿಯುತ್ತಾರೆ. ಇಲ್ಲವಾದವರು ಬಿಡುತ್ತಾರೆ. ಇದೇ ಮನಸ್ಥಿತಿಯನ್ನು ಭಾರತದವರೂ ತೋರಿಸಿದರೆ? ತಮ್ಮ ನೆಲದಲ್ಲಿ ಜನ್ಮತಳೆದ ಪದ್ಧತಿಯನ್ನು ತಾವೇ ಕಡ್ಡಾಯವಾಗಿ ಬೆಳೆಸಲು ಸಾಧ್ಯವಿಲ್ಲವೆಂದ ಮೇಲೆ ಆ ಪದ್ಧತಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದು ಬೆಳೆಯುವುದಾದರೂ ಹೇಗೆ ಸಾಧ್ಯ? ಕೋರ್ಟ್ ನ ಅಭಿಪ್ರಾಯ ಈ ದೃಷ್ಟಿಯಿಂದ ಎಷ್ಟು ಸಮಂಜಸ? ಹೀಗಾದರೆ ಅಮೆರಿಕಾಕ್ಕೂ ಭಾರತಕ್ಕೂ ವ್ಯತ್ಯಾಸವೇನು ಉಳಿದಂತಾಯಿತು?

ಪತಂಜಲಿ ಮುನಿಯ ಕೊಡುಗೆಯಾದ ಯೋಗಕ್ಕೆ 5,000 ವರ್ಷಗಳ ಸುದೀರ್ಘ ಇತಿಹಾಸವಿದೆ. ಹೀಗಿದ್ದರೂ ಸೆಕ್ಯುಲರ್ ವಾದಿಗಳಿಗೆ ಅದು ವರ್ಜ್ಯ. ಆಧುನಿಕತೆಯ ಭ್ರಮೆಯಲ್ಲಿ ತೇಲುವವರಿಗೆ ಯೋಗದ ಮಹತ್ವವಾದರೂ ಹೇಗೆ ತಿಳಿಯಬೇಕು? ಭಾರತ ವಿಶ್ವಗುರುವಾಗುವುದರ ಬಗ್ಗೆ ಮಾತನಾಡುವ ನಾವು ಯೋಗವನ್ನು ಮರೆಯಲು ಸಾಧ್ಯವೇ? ಶಿಕ್ಷಕರು,ವಿಜ್ಞಾನಿಗಳನ್ನು ರಫ್ತು ಮಾಡಬೇಕೆಂದೆಲ್ಲಾ ಕನಸು ಕಾಣುವ ಭಾರತ ಯೋಗ ಶಿಕ್ಷಣವನ್ನು ರಫ್ತು ಮಾಡುವ ಬಗ್ಗೆ ಚಿಂತಿಸಲು 60 ವರ್ಷಗಳೇ ಬೇಕಾಯಿತು. ಜಾಗತೀಕರಣದಿಂದ ಪಡೆದುಕೊಳ್ಳುವುದರಲ್ಲೇ ನಿರತವಾಗಿದ್ದ ಭಾರತಕ್ಕೆ ಕೊಡುಗೆ ನೀಡಬೇಕೆಂದೂ ಅನಿಸಿರಲಿಲ್ಲವಲ್ಲ ಹಾಗಾದರೆ ನಮ್ಮ ದೇಶ ಅದೆಂಥಹ ಅವಸ್ಥೆಯಲ್ಲಿದ್ದಿರಬೇಕು? ಯೋಗ ನಿದ್ರೆಯ ಮೂಲಕ ಜಗತ್ತಿನ ಅಂತಃಸತ್ವವನ್ನು ಜಾಗೃತಗೊಳಿಸುವ ಕೆಲಸಕ್ಕೆ ಮುಂದಾಗಲಿಲ್ಲವಲ್ಲ ಇನ್ನೆಂಥಾ ಜಡ ನಿದ್ದೆಯಲ್ಲಿದ್ದಿರಬೇಕು? ಒಂದು ವೇಳೆ ಯೋಗ ಶಿಕ್ಷಣವನ್ನು ಭಾರತ ಜಾಗತಿಕ ಮಟ್ಟದಲ್ಲಿ ಪ್ರವಹಿಸಿದ್ದೇ ಆದರೆ ಜಗತ್ತಿನಲ್ಲಿರುವ ಅನೇಕ ಜನರ ಸಮಸ್ಯೆಗಳಿಗೆ ಉತ್ತರ ಸಿಕ್ಕಿಯೇ ತೀರುತ್ತದೆ. ಹಾಗಿಲ್ಲದಿದ್ದರೆ, ಭಾರತದ ಪ್ರತಿಯೊಂದು ಆಚರಣೆಗಳನ್ನೂ ಮೂಢನಂಬಿಕೆ ಕನ್ನಡಕದಿಂದ ನೋಡುತ್ತಿದ್ದ ಪಾಶ್ಚಾತ್ಯರು ಯೋಗಕ್ಕೆ ಶರಣಾಗಲು ಸಾಧ್ಯವಾದೀತೇ? ಪರಿಸ್ಥಿತಿ ಗಮನಿಸಿದರೆ ಯೋಗ, ಆಯುರ್ವೇದ, ಇನ್ನೂ ಹಲವು ಭಾರತದ ಪುರಾತನ ವಿದ್ಯೆಗಳು ನಶಿಸಿದ್ದು, ಆಂಗ್ಲರ ಆಕ್ರಮಣದಿಂದಲ್ಲ, ವಿದೇಶಿ ಮೋಹಕ್ಕೆ ಮರುಳಾದ ನಮ್ಮದೇ ಯಡವಟ್ಟಿನಿಂದ ಎಂದು ಅನಿಸದೇ ಇರದು.

ಯೋಗದ ಕುರಿತು ಹುಡುಕಿ ಹೊರಟಾಗಲೆಲ್ಲಾ ಸ್ವಾರಸ್ಯಗಳು ತೆರೆದುಕೊಳ್ಳುತ್ತಲೇ ಹೋಗುತ್ತದೆ. ಯಾವುದನ್ನು ಹಿಂದೂ ಧರ್ಮವನ್ನು impose ಮಾಡಲು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಬೊಬ್ಬೆಹೊಡೆಯಲಾಗುತ್ತಿದೆಯೋ ಅದನ್ನು ಕಲಿಯಲು ಹಿಂದೂ ಧರ್ಮದ ಮೇಲೆ ನಂಬಿಕೆಯೇ ಇರಬೇಕಿಲ್ಲ.! ಇನ್ನು ಅದರ ಮೂಲಕ ಧರ್ಮವನ್ನು ಮತ್ತೊಬ್ಬರ ಮೇಲೆ ಹೇರಲು ಹೇಗೆ ಸಾಧ್ಯ? ಅದೇನಾದರೂ ಅನಾರೋಗ್ಯಕ್ಕೊಳಗಾದವರಿಗೆ ಬೈಬಲನ್ನು ಕೈಗಿತ್ತು ಆರೋಗ್ಯ ಸುಧಾರಣೆಯಾಗುತ್ತದೆ ಆದರೆ ಜೀಸಸ್ ನ ನಂಬಬೇಕು ಎಂದು ಮತಾಂತರ ಮಾಡುವ ಪ್ರಕ್ರಿಯೆಯೇ?  ಹಿಂದೂ ಧರ್ಮವನ್ನೇ ನಂಬದ ಪರಮ ನಾಸ್ತಿಕನೂ ಯೋಗ ಸಾಧನೆ ಮಾಡಬಹುದು. ಯೋಗದಲ್ಲಿ ಸಾಧನೆ ಮಾಡಿದವರು ಜಗತ್ತನ್ನು ಅದ್ಭುತವಾಗಿ ಅರ್ಥೈಸಿಕೊಳ್ಳುತ್ತಾರೆ. ಆಧ್ಯಾತ್ಮದ ಮೂರ್ತ ರೂಪವಾಗುತ್ತಾರೆ. ನಿರಾಕಾರ ಪರಬ್ರಹ್ಮನನ್ನು ಕಾಣುತ್ತಾರೆ. ಓರ್ವ ನಾಸ್ತಿಕನಿಗೂ ಚಿತ್ತ-ವೃತ್ತಿ-ನಿರೋಧದ ಮೂಲಕ ಭಗವತ್ಗೀತೆಯಲ್ಲೂ ವ್ಯಾಖ್ಯಾನಿಸಿರುವ ಅಂಶಗಳನ್ನು ತಿಳಿಸುತ್ತದೆ. ಇದು ಯೋಗದ ಶ್ರೇಷ್ಠತೆ.

ಯೋಗ ಶಿಕ್ಷಣದ ಇಷ್ಟೆಲ್ಲಾ ಶ್ರೀಮಂತಿಕೆ ಕಣ್ಮುಂದೆ ಇಟ್ಟುಕೊಂಡೂ ಅದನ್ನು ಮುಂದಿನ ಪೀಳಿಗೆಗೆ ಕಡ್ಡಾಯವಾಗಿ ತಲುಪಿಸುವಲ್ಲಿ ನಾವೇಕೆ ಎಡವುತ್ತಿದ್ದೇವೆ? ಆಧ್ಯಾತ್ಮದಿಂದ ಬೇರ್ಪಟ್ಟು ಆಧುನಿಕತೆಗೆ ಜಿಗಿದಿರುವ ತಂದೆತಾಯಿಗಳಿಗಂತೂ ತಿಳಿಯುತ್ತಿಲ್ಲ. ನ್ಯಾಯ ಹೇಳುವ ನ್ಯಾಲಾಯಗಳಿಗಾದರೂ ತಿಳಿಯಬಾರದೇ? ಇಂತಹ ವಿಷಯಗಳಲ್ಲಿ  ಅಧಿಕಾರ ನಡೆಸುವವರು ಗಮನ ಹರಿಸುವುದೇ ಕಡಿಮೆ. ಒಂದು ವೇಳೆ ಅಂತಹ ಕ್ರಾಂತಿಕಾರಿ ನಿರ್ಧಾರ ತೆಗೆದುಕೊಂಡರೂ ಪಿ.ಐ.ಎಲ್ ದಾಖಲಿಸಿದರೆ, ವಿಚಾರಣೆ ನಡೆಸುವ  ಕೋರ್ಟ್ ಗಳು ಯೋಗ ಶಿಕ್ಷಣವನ್ನು ಕಡ್ಡಾಯಗೊಳಿಸಿದರೆ ಅಲ್ಪಸಂಖ್ಯಾತರು ಏನು ಮಾಡಬೇಕೆಂಬ ಪ್ರಶ್ನೆ ಮುಂದಿಟ್ಟು ಸರ್ಕಾರದ ಇಚ್ಛಾಶಕ್ತಿಯೇ ಕುಸಿಯುವಂತಹ ಆದೇಶ ನೀಡುತ್ತವೆ. ಹಾಗಾದರೆ ಭಾರತದಲ್ಲಿ ಭಾರತೀಯರ ಕೊಡುಗೆಗೆ ಇರುವ ಸ್ಥಾನ ಏನು? ಪರ ದೇಶಗಳು ಭಾರತದ ಕೊಡುಗೆಯನ್ನು ಕಣ್ಮುಂದೆಯೇ ಯಥೇಚ್ಚವಾಗಿ ಬಳಸಿಕೊಂಡು ಉದ್ಧಾರವಾಗುತ್ತಿದ್ದರೂ ಸುಮ್ಮನಿರಬೇಕು!  ಅಲ್ಪಸಂಖ್ಯಾತರಿಗೆ, ಸೆಕ್ಯುಲರ್ ಗಳಿಗೆ ಬೇಡವಾದರೆ ತಿರಸ್ಕರಿಸಲಿ, ಗೋಗರೆದು ಅವರ ಅನುಮತಿ ಪಡೆದ ನಂತರವೇ ಎಲ್ಲವೂ ಜಾರಿಗೆ ಬರಬೇಕೆಂಬ ನಿಯಮ ಏಕೆ? ಇಷ್ಟಕ್ಕೂ ಅವರಿಗೆ ಕ್ರೌರ್ಯ, ಮತಾಂತರವನ್ನು ಹೊರತು ಪಡಿಸಿ ಯಾವ ವಿಷಯಗಳು ಅವರಿಗೆ ಪಥ್ಯವಾಗಿದೆ ಹೇಳಿ?

ಯೋಗ ಶಿಕ್ಷಣ ಜಾರಿಗೂ ಅವರ ಅನುಮತಿಯೇ ಬೇಕು, ಶಾಲೆಗಳಲ್ಲಿ ರಾಷ್ಟ್ರೀಯತೆ ಬಗ್ಗೆ ಕಲಿಸುವುದಕ್ಕೂ ಅವರ ಹುಕುಂ ಇಲ್ಲದೇ ನಡೆಯುವಂತಿಲ್ಲ! ಅಲ್ಪಸಂಖ್ಯಾತರಿಂದ  ನಮ್ಮ ದೇಶದ ಹೆಮ್ಮೆಯ ಸಂಗತಿಗಳು ಕಡ್ಡಾಯವಾಗಿ ಜಾರಿಗೊಂಡು ಪುನರುತ್ಥಾನದ ಹಾದಿ ಹಿಡಿಯಲು ಸಾಧ್ಯವಿಲ್ಲ. ನಮ್ಮ ದೇಶದ ವೈಭವ ಪುನರುತ್ಥಾನಗೊಳ್ಳದೇ ಅಲ್ಪಸಂಖ್ಯಾತರ ಸದ್ದು ಅಡಗಲು ಸಾಧ್ಯವಿಲ್ಲ.

60 ವರ್ಷಗಳ ನಂತರವಾದರೂ ಆಶಾಕಿರಣವೊಂದು ಹೊರಹೊಮ್ಮಿದೆ. ಭಾರತವನ್ನು ಜಗದ್ಗುರುವನ್ನಾಗಿಸಲು ಅವಶ್ಯವಾಗಿರುವ ಸಂಸ್ಕೃತಿಯ ಬಗ್ಗೆ ವಿಶ್ವದ ಮಟ್ಟದಲ್ಲಿ ಆಸಕ್ತಿ ಮೂಡಿಸಲಾಗುತ್ತಿದೆ.  ಇತ್ತೀಚೆಗಷ್ಟೇ ಆಯುರ್ವೇದವನ್ನು ಹೆಚ್ಚು ಬಳಕೆ ಮಾಡುವ ಉದ್ದೇಶದಿಂದ ರಾಷ್ಟ್ರೀಯ ಆಯುಷ್ ಹೆಲ್ತ್ ಮಿಷನ್ ಗೆ ಚಾಲನೆ ನೀಡಲು ನಿರ್ಧರಿಸಿತ್ತು. ಇದಕ್ಕೂ ಮುನ್ನವೇ ಯೋಗ ದಿನಾಚರಣೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಚರಿಸಲು ಪ್ರಧಾನಿ ಮೋದಿ ಅಮೆರಿಕಾದಲ್ಲಿ ನಿಂತು ಕರೆ ಕೊಟ್ಟಿದ್ದಕ್ಕೆ ಈ ವರೆಗೂ 130 ರಾಷ್ಟ್ರಗಳು ಓಗೊಟ್ಟಿವೆ. ಭಾರತದ ಯೋಗಿಗಳ ಕ್ರಿಯೆ ಇನ್ನು ಮುಂದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಲಿದೆ. ವಿಶ್ವವನ್ನು ಬೆಳಗಲಿದೆ. ಇಡಿ ಜಗತ್ತು ಸನಾತನ ಸಂಸ್ಕೃತಿಯತ್ತ ನಿಧಾನವಾಗಿ ವಾಲುತ್ತಿದೆ. ಆದರೆ ನಿರಂತರವಾಗಿ ಯೋಗವನ್ನು ಹಿಂದುತ್ವದ ಭಾಗವಾಗಿಯೇ ನೋಡುತ್ತಿದ್ದ, ಹೀಗಳೆಯುತ್ತಿದ್ದ ಸೆಕ್ಯುಲರ್ ವಾದಿಗಳ ಅಸ್ಥಿತ್ವ ಜಾಗತಿಕ ಮಟ್ಟದಲ್ಲಿ ಏನಾಯಿತು ಎಂಬುದು ಸದ್ಯದ ಪ್ರಶ್ನೆ? ಇಂದು ಯೋಗ, ಆಯುರ್ವೇದಕ್ಕೆ ಮುಗಿಬೀಳುವಂತೆಯೇ ಮುಂದೊಂದು ದಿನ ವೇದ, ಸಂಸ್ಕೃತಕ್ಕೂ ಇಡಿ ಜಗತ್ತು ಶರಣಾದರೂ ಅಚ್ಚರಿಯಿಲ್ಲ. ಆಗ ಇಡಿ ಜಗತ್ತು ಭಾರತದೊಂದಿಗಿದ್ದರೆ. 'ಕೋಮುವಾದಿ'ಗಳ ವಿರುದ್ಧ  ಪ್ಲೇಕಾರ್ಡ್ಸ್ ಹಿಡಿದು ಮತ್ತೊಂದು ಬದಿಯಲ್ಲಿ ನಿಲ್ಲುವ ಸೆಕ್ಯುಲರ್ ಗಳನ್ನು ನೋಡಲು ಬಹಳ ಮಜವಾಗಿರುತ್ತದೆ

Thursday 13 November 2014

ಯಾವ ಸಾಧನೆ ಮಾಡಿದ್ದಾರೆಂದು ನಹರೂ ಅವರ ಜನ್ಮದಿನವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಬೇಕು?

*ದೇಶದ ಒಳಿತಿಗಾಗಿ ಯುವ ಶಕ್ತಿಯನ್ನು ಜಾಗೃತಗೊಳಿಸಿದ ಸ್ವಾಮೀ ವಿವೇಕಾನಂದರ ನೆನಪಿಗಾಗಿ ಇಡೀ ರಾಷ್ಟ್ರ ಅವರ ಜನ್ಮದಿನವನ್ನು ಯುವದಿನೋತ್ಸವ ಎಂದು ಆಚರಿಸುತ್ತದೆ. 

*ಧರ್ಮ ರಕ್ಷಣೆಗಾಗಿ ಅವತರಿಸಿ, ಜ್ಞಾನವನ್ನು ದಯಪಾಲಿಸಿದ ಯತಿಶ್ರೇಷ್ಠ ಶ್ರೀ ಆದಿ ಶಂಕರಾಚಾರ್ಯರ ಜನ್ಮ ದಿನದ ಅಂಗವಾಗಿ ತತ್ವಜ್ಞಾನಿಗಳ ದಿನಾಚರಣೆ ನಡೆಯುತ್ತದೆ. 

*ಬಲಿಷ್ಠ ಭಾರತದ ನಿರ್ಮಾಣಕ್ಕೆ ಕಾರಣಕರ್ತರಾಗಬೇಕಿರುವ ಇಂಜಿನಿಯರ್ ಗಳ ಸ್ಪೂರ್ತಿಯ ಚಿಲುಮೆಯಾಗಿರುವ ಸರ್. ಎಂ ವಿಶ್ವೇಶ್ವರಯ್ಯ ನವರ ಜನ್ಮ ದಿನವನ್ನು ಇಂಜಿನಿಯರ್ಸ್ ಡೇ ಎಂದು ಆಚರಿಸುತ್ತೇವೆ... 

ಈ ಸಾಲಿಗೆ, ದೇಶಕ್ಕಾಗಿ ರಾಷ್ಟ್ರದ ಏಕತೆಗಾಗಿ ದುಡಿದ ಅನೇಕ ಮಹಾನ್ ವ್ಯಕ್ತಿಗಳ ಜನ್ಮ ಸ್ಮರಣಾರ್ಥವಾಗಿ ಒಂದಲ್ಲಾ ಒಂದು ರೀತಿಯ ದಿನಾಚರಣೆಗಳಿರುತ್ತವೆ. ಅಲ್ಲಿ ಅವರ ಸಾಧನೆಗಳನ್ನು ತಿಳಿಸುವ ಮೂಲಕ ಮುಂದಿನ ಪೀಳಿಗೆಗೆ ಉತ್ಸಾಹ ತುಂಬಲಾಗುತ್ತದೆ. ಸ್ಪಷ್ಟ ಭವಿಷ್ಯ ರೂಪಿಸಿಕೊಳ್ಳುವುದಕ್ಕೆ ಇಂತಹ ಮಾದರಿ ವ್ಯಕ್ತಿಗಳ ಜನ್ಮ ದಿನಾಚರಣೆಗಳು ಪೂರಕವಾಗಿರುತ್ತದೆ. ಅಂತವರೆಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ಭವ್ಯ ಭಾರತಕ್ಕಾಗಿ ಭದ್ರ ಬುನಾದಿ ಹಾಕಿಕೊಟ್ಟವರೆ.... 

ವಿವೇಕಾನಂದರು ದೇಶದ ಯುವ ಶಕ್ತಿಯನ್ನು ಬಳಸಿಕೊಂಡು ದೇಶ ನಿರ್ಮಾಣ ಸಾಧ್ಯ ಎಂಬುದನ್ನು ತಿಳಿಸಿ ಯುವಕರನ್ನು ಬಡಿದೆಬ್ಬಿಸಿದರು. ಯಾವುದೇ ದೇಶ ದೀರ್ಘಕಾಲ ಉಳಿಯಬೇಕಾದರೆ ಸತ್ವಯುತವಾದ ಧರ್ಮ ಕಾರಣ ಎಂಬ ಮಾತಿದೆ. ಅಂತಹ ಧರ್ಮವನ್ನು ಉಳಿಸಲು ಶಂಕರರು ಅವತರಿಸಿದರು. ಧರ್ಮ ರಕ್ಷಣೆಗೆ ಮಾರ್ಗದರ್ಶನ ನೀಡಿದರು, ವಿಶ್ವೇಶ್ವರಯ್ಯನವರು ಇಂಜಿನಿಯರ್ ಗಳಿಗಷ್ಟೇ ಅಲ್ಲದೇ ರೈತರ ಪಾಲಿಗೂ ದೇವರಾಗಿದ್ದಾರೆ...... ಇವರೆಲ್ಲರೂ ದೇಶದ ಯಾವುದೇ ಉನ್ನತವಾದ ಪದವಿ ಅಲಂಕರಿಸಿದವರಲ್ಲ, ಆದರೂ ದೇಶ ಇವರನ್ನೇ ಉನ್ನತಿಯ ಪ್ರತಿರೂಪದಂತೆ ಕಾಣುತ್ತದೆ. 

ಆದರೆ ಈ ಮೇಲಿನ ಎಲ್ಲದಕ್ಕೂ ಅಪವಾದದಂತಿರುವ ಯಾರದ್ದೋ ದಯೆಯಿಂದ ದೇಶದ ಉನ್ನತ ಸ್ಥಾನ ಅಲಂಕರಿಸಿದ, ’ಮೈ’ ಮೇಲೆ ಪ್ರಜ್ನೆಯೇ ಇಲ್ಲದ,ಯುವಶಕ್ತಿ, ಧರ್ಮ,ರೈತರ(ಗಾಂಧೀಜಿ ಗ್ರಾಮ ರಾಜ್ಯದ ಕನಸನ್ನು ಭಗ್ನ ಮಾಡಿರುವುದು) ಬಗ್ಗೆ ಕಿಂಚಿತ್ತೂ ತಲೆಕೆಡಿಸಿಕೊಳ್ಳದ ಓರ್ವ ವ್ಯಕ್ತಿಯ ಜನ್ಮದಿನವನ್ನು ಕೇವಲ ಪ್ರಥಮ ಪ್ರಧಾನಿಯೆಂಬ ಮಾತ್ರಕ್ಕೆ ದೇಶದ ಭವಿಷ್ಯ ಎಂದೇ ಗುರುತಿಸಲಾಗುವ ಮಕ್ಕಳ ದಿನಾಚರಣೆಯೆಂದು ಆಚರಿಸುವುದು ಎಷ್ಟು ಸರಿ.....? 

ಹೌದು! ನೆಹರೂ ಹಾಗೂ ಅವರ ಜನ್ಮ ದಿನದ ಅಂಗವಾಗಿ ನಡೆಸುವ ಮಕ್ಕಳ ದಿನಾಚರಣೆ ಎಂದಿಗೂ ಸೋಜಿಗವಾಗೇ ಕಾಡುತ್ತದೆ.... ಕಾರಣ ಸ್ಪಷ್ಟ, ನೆಹರೂ ಜನ್ಮದಿನಕ್ಕೂ ದೇಶದ ಭವಿಷ್ಯವೆಂದೇ ಹೇಳುವ ಮಕ್ಕಳಿಗೂ ಊಹೆಗೂ ಮೀರಿದ ಅಂತರವಿದೆ!.... ನೆಹರೂ ದೇಶದ ಬಗ್ಗೆಯೇ ಗಂಭೀರವಾಗಿ ಚಿಂತಿಸಿ ದಿಟ್ಟ ನಿರ್ಧಾರ ತೆಗೆದುಕೊಳ್ಳಲು ವಿಫಲರಾದರು. ಇನ್ನು ದೇಶವನ್ನು ಮುನ್ನಡೆಸಿಕೊಂಡು ಹೋಗುವ ಮುಂದಿನ ಪೀಳಿಗೆ ಅರ್ಥಾತ್ ಮಕ್ಕಳ ಬಗ್ಗೆ ಯಾವ ರೀತಿಯ ಭಾವನೆ ಹೊಂದಿರಲು ಸಾಧ್ಯ? ದೇಶಕ್ಕೆ ಮಾದರಿಯಾಗದೇ ಇದ್ದವರು ಮಕ್ಕಳಿಗೆ ಮಾದರಿಯಾದಾರೇ? 

ಗಾಂಧಿಗಿರಿಯ ನೆರವಿನಿಂದ ಪಂಡಿತ್ ಜವಹರಲಾಲ್ ನೆಹರೂ ಪ್ರಧಾನಿಯಾದರೆಂಬುದನ್ನು ಬಿಟ್ಟರೆ ಅವರನ್ನು ಯಾವ ಕಾರಣಕ್ಕಾಗಿ ಗೌರವಿಸಬೇಕು ಎಂಬ ಪ್ರಶ್ನೆಗೆ ಸಾಲು ಸಾಲು ವೈಫಲ್ಯಗಳು ಉತ್ತರವಾಗಿ ನಿಲ್ಲುತ್ತವೆ. ಅಲ್ಲದೇ, ಯುವಪೀಳಿಗೆಗೆ ಮಾದರಿಯಾಗಬೇಕಿದ್ದ ವ್ಯಕ್ತಿಯ ದೌರ್ಬಲ್ಯಗಳು ದಾರಾಳವಾಗಿ ಸಿಗುತ್ತವೆ..... ಭಾರತ ನಿಂತಿರುವುದೇ ಯುವಶಕ್ತಿ ಹಾಗೂ ಧರ್ಮದ ಆಧಾರದ ಮೇಲೆ... ಆದರೆ ನೆಹರೂ ಅವರನ್ನು ನೋಡಿದರೆ ಈ ಎರಡೂ ವಿಷಯಗಳಲ್ಲಿ ಜವಾಬ್ದಾರಿಯಿಲ್ಲದ ಶೋಕಿಗೆ ಇರುವ ಪರ್ಯಾಯ ಪದದಂತೆ ನಮ್ಮೆದುರು ನಿಲ್ಲುತ್ತಾರೆ. ರಷ್ಯಾದಲ್ಲಿ ಓದಿದ ಪರಿಣಾಮ ಧರ್ಮದ ಬಗ್ಗೆ ತಿರಸ್ಕಾರ......ಬೇಜವಾಬ್ದಾರಿತನವಿದ್ದರೂ ಸೂಟು ಬೂಟು ಧರಿಸಿ, ಸಿಗರೇಟು ಹೊಗೆ ಬಿಡುವ ಗತ್ತು, ಶೋಕಿ..... ಅವರನ್ನು ಭಾರತದ ಪ್ರಥಮ ಪ್ರಧಾನಿ ಎಂದು ಒಪ್ಪಿಕೊಳ್ಳುವುದಕ್ಕೇ ಸ್ವಲ್ಪ ಕಷ್ಟವಾದೀತು.... ಗುರಿಯೇ ಇಲ್ಲದೇ ’ಪಿತ್ರಾರ್ಜಿತ’ದಲ್ಲೇ ತನ್ನ ಅಸ್ಥಿತ್ವವನ್ನು ಉದ್ಧಾರಗೊಳಿಸುವ ಓರ್ವ ಕಪಟಿಯಂತೆ ಭಾಸವಾಗುತ್ತದೆ...... ತನ್ನ ದೌರ್ಬಲ್ಯಕ್ಕಾಗಿ ದೇಶವನ್ನೇ ವಿಭಜಿಸಿದ ಧೂರ್ತರಂತೆಯೇ ನೆಹರೂ ಕಾಣುತ್ತಾರೆ....

ಯುವ ದಿನೋತ್ಸವ ಬಂತೆಂದರೆ ಸ್ವಾಮೀ ವಿವೇಕಾನಂದರ ಬಗ್ಗೆ ಉತ್ಸಾಹದಿಂದ ಮಾತನಾಡುತ್ತೇವೆ, ಇದೇ ಶಾಲಾ ಮಕ್ಕಳಿಗೆ ಅವರ ಸಾಧನೆಗಳ ಬಗ್ಗೆ ಸಾಕಷ್ಟು ವಿಚಾರ ತಿಳಿಸುತ್ತೇವೆ....ಗಾಂಧೀ ಜಯಂತಿ ಬಂತೆದರೂ ಸಹ ಸ್ವಾತಂತ್ರ್ಯ ತಂದುಕೊಟ್ಟ ರಾಷ್ಟ್ರಪಿತನ ಬಗ್ಗೆ ಕಲವಾದರೂ ಒಳ್ಳೆಯ ವಿಷಯಗಳನ್ನು ಪ್ರಸ್ತಾಪಿಸಬೇಕೆನಿಸುತ್ತದೆ. ಆದರೆ ಮಕ್ಕಳ ದಿನಾಚರಣೆ ಬಂತೆಂದರೆ ಸಾಕು.... ಒಳ್ಳೆಯದ್ದು ಮಾತನಾಡಬೇಕು ಎಂದು ದುರ್ಬೀನು ಹಾಕಿ ತಡಕಿದರೂ ಒಂದೂ ಒಳ್ಳೆಯ ವಿಷಯ ಸಿಗುವುದಿಲ್ಲ. ಬದಲಾಗಿ ಹೇಗೋ ಒಂದೆರಡು ಮಾತನಾಡಿ ಕಲೆ ಹೊತ್ತುಕೊಂಡಿರುವ ನೆಹರೂ ಇತಿಹಾಸಕ್ಕೆ ಕತ್ತರಿ ಹಾಕುತ್ತೇವೆ.... ಮಕ್ಕಳು ತಾನೇ....ಯಾಮಾರಿಸುವುದು ಸುಲಭ, ಅವುಗಳಿಗೆ ನೆಹರೂ ಪೂರ್ವಾಪರ ಗೊತ್ತಿರುವುದಿಲ್ಲ ಹೇಳಿದ್ದನ್ನು ಕೇಳಿಕೊಂಡು ಸುಮ್ಮನಿರುತ್ತವೆ..... ಇತಿಹಾಸ ಗೊತ್ತಿರುವುದಿಲ್ಲ. ಕೆದಕುವ ಗೋಜಿಗೂ ಹೋಗುವುದಿಲ್ಲ. ಅಥವಾ ಅದರ ಅವಶ್ಯಕತೆಯೂ ಆ ವಯೋಮಿತಿಯಲ್ಲಿರುವುದಿಲ್ಲ..... ತಮ್ಮ ಮುಂದಿನ ಪೀಳಿಗೆಗೆ ಮತ್ತೆ ಇದೇ ನಾಟಕ ಅವರೂ ಮುಂದುವರೆಸುತ್ತಾರೆ... ಉಳಿದಂತೆ ಹಾಗಾಗುವುದಿಲ್ಲ ಶಂಕರರ ಬಗ್ಗೆಯೋ, ವಿವೇಕಾನಂದರ ಬಗ್ಗೆಯೋ ಇರುವ ಸತ್ಯ ಸಂಗತಿಗಳನ್ನು ಮಾತನಾಡಿದರೆ ಅದನ್ನು ತಮಗೆ ಬೇಕಾದ ಬಗೆಯಲ್ಲಿ ತಿರುಗಿಸಿಕೊಂಡು ಇತಿಹಾಸವನ್ನು ಕೆದಕಿ ತಿರುಚುವವರೇ ಹೆಚ್ಚು...... ಆದರೆ ನೆಹರೂ ಅವರಿಗೆ ಈ ತೊಂದರೆಯೂ ಇಲ್ಲ... ಬಹುಶಃ ಈ ವಿಷಯ ನೆಹರೂ ಅವರಿಗೂ ಗೊತ್ತಿದ್ದೇ ಬೇರೆ ಯಾವುದೇ ದಿನಾಚರಣೆಗೆ ತಮ್ಮ ಜನ್ಮದಿನವನ್ನು ಶಿಫಾರಸ್ಸು ಮಾಡುವ ಬದಲು ಏನೂ ಅರಿಯದ ಮುಗ್ಧ ಮಕ್ಕಳ ದಿನಾಚರಣೆಯಾಗಲಿ ಎಂದು ಆಶಿಸಿದ್ದು...
ಇಷ್ಟಕ್ಕೂ ಮಕ್ಕಳ ದಿನಾಚರಣೆ ಎಂದರೆ ನೆಹರೂ ಬಗ್ಗೆ ಮಕ್ಕಳಿಗೆ ಏನು ಹೇಳಬೇಕು...... ನಮ್ಮ ದೇಶ ವಿಭಜನೆಗೆ ಕಾರಣವಾದ ’ಸ್ತ್ರೀ’ ಹುಚ್ಚನ್ನು ತೋರಿಸಬೇಕೋ ಅಥವಾ ಅದೇ ಸ್ತ್ರೀಯರ ಮುಂದೆ ಪೌರುಷ ತೋರಿಸುತ್ತಿದ್ದ ನೆಹರೂ ಇತ್ತ ಚೀನಾಗೆ ಹೆದರಿ ಭಾರತದ ಭೂಭಾಗವನ್ನು ಪರಕೀಯರಿಗೆ ಬಲಿಕೊಟ್ಟ ಪ್ರಧಾನಿ ಎಂದು ವಿವರಿಸಬೇಕೋ.....? ಯಾವುದೂ ಅಲ್ಲ, ರಷ್ಯಾದಲ್ಲಿ ಮೋಜು ಮಸ್ತಿ ಮಾಡಿಕೊಂಡು ವಿದ್ಯಾಭ್ಯಾಸ ನಡೆಸಿ ಭಾರತದ ಬಗ್ಗೆ ಕಿಂಚಿತ್ತೂ ಅರಿವಿಲ್ಲದ ವ್ಯಕ್ತಿ ಭಾರತದ ಮೊತ್ತ ಮೊದಲ ಪ್ರಧಾನಿಯಾದರೆಂಬ ಸಂತೋಷಕ್ಕೆ ಮಕ್ಕಳ ದಿನಾಚರಣೆ ಎಂದು ಹೇಳಬೇಕೋ...? ಅಥವಾ ಇದ್ಯಾವುದೂ ನಮ್ಮಿಂದ ಹೇಳಲು ಸಾಧ್ಯವಿಲ್ಲ ಎಂದು ಮಕ್ಕಳ ಕೈಗೆ ನೆಹರೂ ಅವರ ಜೀವನ ಚರಿತ್ರೆ ಪುಸ್ತಕವನ್ನು ನೀಡಬೇಕೋ?ಏನೆಂದು ನಮ್ಮ ಮಾಜಿ ಪ್ರಧಾನಿಯನ್ನು ಮಕ್ಕಳಿಗೆ ಪರಿಚಯಿಸಬೇಕು....? ದೇಶದ ಪ್ರಥಮ ಪ್ರಧಾನಿ ಎಂಬುದನ್ನು ಬಿಟ್ಟರೆ ತಮ್ಮ ಜನ್ಮದಿನವನ್ನು ಮಕ್ಕಳ ದಿನಾಚರಣೆಯಾಗಿ ಆಚರಿಸುವಂತಹ ಯಾವ ಅರ್ಹ ಕೆಲಸವನ್ನು ನೆಹರೂ ಮಾಡಿದ್ದಾರೆ? ಒಂದೇ ಒಂದು ಉದಾಹರಣೆ ಕೊಡಿ....

ಇಷ್ಟಕ್ಕೂ ಮಕ್ಕಳು ಎಂದರೆ ತಕ್ಷಣಕ್ಕೆ ಅರಿವಾಗುವುದು ಶಿಕ್ಷಣ, ಇಂಥಹ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿ, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದ ಮೌಲಾನ ಅಬ್ದುಲ್ ಕಲಾಂ ಅವರ ಜನ್ಮ ದಿನವನ್ನೇ ಮಕ್ಕಳ ದಿನಾಚರಣೆ ಎಂದು ಆಚರಿಸದೇ ಇದ್ದ ಮೇಲೆ ಯಾವ ಮಾನದಂಡದ ಮೇಲೆ ನೆಹರೂ ಜನ್ಮ ದಿನವನ್ನು ಮಕ್ಕಳ ದಿನಾಚರಣೆ ಎಂದು ಆಚರಿಸಬೇಕು....? ಭಾರತದ ಮೊದಲ ಪ್ರಧಾನಿ ಎಂಬುದೇ ಎಲ್ಲಕ್ಕಿಂತ ದೊಡ್ಡ ಮಾನದಂಡವೇ....? ಗಾಂಧಿ ಇಲ್ಲದ ನೆಹರೂ ರನ್ನು ಒಮ್ಮೆ ನೆನಪಿಸಿಕೊಳ್ಳಿ ಕೃಷ್ಣನಿಲ್ಲದ ಅರ್ಜುನನಿದ್ದಂತೆ.... ನಮ್ಮ ದೇಶಕ್ಕೆ ಅಂತದ್ದೊಂದು ಹೆಸರೂ ಪರಿಚಯವಾಗಿರುತ್ತಿರಲಿಲ್ಲ ಎಂದೆನಿಸುತ್ತದೆ.... ಹಾ... ಅರ್ಜುನನಿಗೆ ಕ್ಷಾತ್ರ ಗುಣಗಳಾದರೂ ಇತ್ತು.... ಆದರೆ ಚೀನಾದ ಮೇಲೆ ಯುದ್ಧ ಸೋತು, ಮಾತೆತ್ತಿದರೆ ವಿಶ್ವಸಂಸ್ಥೆ ಮುಂದೆ ಕಣ್ಣೀರಿಡುತ್ತಿದ್ದ ನೆಹರೂ ಅವರಲ್ಲಿ....?
’ದಿನಾಚರಣೆ’ಗೂ ವ್ಯಕ್ತಿಯ ಜನ್ಮದಿನಕ್ಕೂ ಒಂದಕ್ಕೊಂದು ಪೂರಕವಾಗದೇ ಪ್ರಧಾನಿಯೆಂಬ ಒಂದೇ ಒಂದು ಮಾನದಂಡದ ಮೇಲೆ ಆಚರಣೆ ನಡೆಯಬಹುದು ಎಂದಾರೆ ನಹರೂ ಅವರ ಸಂವೇದನೆಯೇ ಇಲ್ಲದ ಪರಂಪರೆಯನ್ನು ಮತ್ತೊಂದು ರೀತಿಯಲ್ಲಿ ನಡೆಸಿಕೊಂಡು ಬಂದಿರುವ ಅವರ ನಂತರ ದೀರ್ಘಕಾಲದ ಆಡಳಿತ ನಡೆಸಿದ ಕಾಂಗ್ರೆಸ್ ಪ್ರಧಾನಿ ಮನಮೋಹನ ಸಿಂಗ್ ಅವರ ಜನ್ಮ ದಿನಕ್ಕೂ ದಿನಾಚರಣೆ ಗೊತ್ತುಪಡಿಸಬಹುದು.....

ನೆಹರೂ ರಂತೆ ’ಆಧುನಿಕ ಗಾಂಧಿ’ಗಿರಿಯ ನೆರವಿನಿಂದ ಅತಿ ದೀರ್ಘಕಾಲ ಆಡಳಿತ ನಡೆಸಿದರೆಂಬ ಒಂದೇ ಒಂದು ಮಾನದಂಡದ ಮೇಲೆ ಮನಮೋಹನರ ಜನ್ಮ ದಿನವನ್ನು ’ಉತ್ತಮ ವಾಗ್ಮಿಗಳ ದಿನಾಚರಣೆ’ ಎಂದರೆ ಎಷ್ಟು ಅನರ್ಥವಾಗುತ್ತದೋ ನೆಹರೂ ಜನ್ಮ ದಿನವನ್ನು ಮಕ್ಕಳ ದಿನಾಚರಣೆಯನ್ನಾಗಿ ನಡೆಸುವುದು ಅಷ್ಟೇ ಅನರ್ಥ.... ಮನಮೋಹನರ ಜನ್ಮ ದಿನದ ಅಂಗವಾಗಿ ಶೌರ್ಯ ಪ್ರಶಸ್ತಿ ಹಾಗೂ ಶ್ರೇಷ್ಠ ವಾಗ್ಮಿಗಳಿಗೆ ಪ್ರಶಸ್ತಿ ನೀಡಿದಂತೆಯೇ ನೆಹರೂ ಅವರ ಜನ್ಮ ದಿನಾಚರಣೆಯನ್ನೂ ಆಚರಿಸಬಹುದು ಕೂಡ.....ಮನಮೋಹನ್ ಸಿಂಗ್, ಮಾಜಿ ಪ್ರಧಾನಿ ಪಿ.ವಿ. ನರಸಿಂಹ ರಾವ್ ಅವರ ಸಚಿವ ಸಂಪುಟದಲ್ಲಿ ಕಾರ್ಯ ನಿರ್ವಹಿಸಿ ದೇಶಕ್ಕೆ ಎದುರಾಗಿದ್ದ ಸಂಕಷ್ಟದಿಂದ ಪಾರುಮಾಡಿ ಅತ್ಯುತ್ತಮ ಆರ್ಥಿಕ ತಜ್ನರೆಂದು ಖ್ಯಾತಿಗಳಿಸಿದರು. ಆದರೆ ನಂತರದ ದಶಕಗಳಲ್ಲಿ ನಿರ್ಣಾಯಕ ಹಂತದಲ್ಲಿ ತಮ್ಮ ಆಡಳಿತದಲ್ಲೇ ದೇಶವನ್ನು ಅತ್ಯಂತ ಕೆಳ ಮಟ್ಟಕ್ಕೆ ತಲುಪಿಸಿದ ಕುಖ್ಯಾತಿಯೂ ಸಹ ಅದೇ ಮನಮೋಹನರಿಗೆ ಸಲ್ಲುತ್ತದೆ.
ಯಾವ ಸಾಧನೆಗಾಗಿ ಅಂತಹ ಜನ್ಮದಿನವನ್ನು ನಿರ್ದಿಷ್ಟವಾದ ಹೆಸರಿನಲ್ಲಿ ಆಚರಿಸಬೇಕು...? ನೆಹರೂ ಜನ್ಮ ದಿನಕ್ಕೂ ಮಕ್ಕಳಿಗೂ ಒಂದಕ್ಕೊಂದು ಸಂಬಂಧವಿಲ್ಲ, ಮಕ್ಕಳೆಂಬ ದೇಶದ ಭವಿಷ್ಯವನ್ನು ರೂಪಿಸುವುದರಲ್ಲಿ ಅವರ ಕೊಡುಗೆ ಶೂನ್ಯ ...... 
ನಾವು ಅಂದು ಗಾಂಧಿ ಗಿರಿಗೆ ಪ್ರಶ್ನಾತೀತ ಸ್ಥಾನ ನೀಡಿರುವುದರ ಫಲ ಇಂದಿಗೂ ನೆಹರೂ ಜನ್ಮದಿನ ಮಕ್ಕಳ ದಿನಾಚರಣೆಯಾದಂತೆ ಸಂಬಂಧವೇ ಇಲ್ಲದಿರುವ ವಿಷಯಕ್ಕೆ ತಳುಕು ಹಾಕಿಕೊಂಡಿರುವ ಇನ್ನೂ ಅನೇಕ ಆಚರಣೆಗಳನ್ನು ನಾವು ನೋಡುತ್ತಿದ್ದೇವೆ....!

Thursday 6 November 2014

ವಿಧಾನಸೌಧದಲ್ಲಿ ತೋಳು ತಟ್ಟಿದ್ದ ಸಿದ್ದರಾಮಯ್ಯನವರ ಪೌರುಷ ಈಗೆಲ್ಲಿ ಹೋಯಿತು?



He Shirks, He ’Sleeps’, He Ducks, and he does it again! ಈ ಮೂರ್ನಾಲ್ಕು ಪದ ಪುಂಜಗಳನ್ನಿಟ್ಟುಕೊಂಡು ರಾಷ್ಟ್ರೀಯ ಮಾಧ್ಯಮಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಂಡವಾಳ ಬಯಲು ಮಾಡಿದ್ದವು. ಕಳೆದ ಕೆಲವು ತಿಗಳಿನಿಂದ ರಾಜ್ಯದಲ್ಲಿ ಮಹಿಳೆಯ ಮಾನಭಂಗವಾಗುತ್ತಿರುವುದು ಎಂಥವರಿಗೂ ರಕ್ತ ಕುದಿಯುವಂತೆ ಮಾಡುತ್ತದೆ. ಆದರೆ ರಾಜ್ಯದ ಜನತೆಗೆ ಉತ್ತರದಾಯಿಯಾಗಿರುವ ಸರ್ಕಾರವನ್ನು ಹೊರತುಪಡಿಸಿ ಎನ್ನುವುದು ಅತ್ಯಾಚಾರಕ್ಕಿಂತಲೂ ಘೋರ!

ಇತ್ತೀಚಿನ ದಿನಗಳಲ್ಲಿ ಕಣ್ಣಿಗೆ ರಾಚುವಂತೆ ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ ನಿಜ. ಆದರೆ ಕರ್ನಾಟಕದಲ್ಲಂತೂ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳು ಮಟ್ಟಿಗೆ ಹಸುಳೆಗಳಿಂದ ವೃದ್ಧರವರೆಗೂ ಅತ್ಯಾಚಾರ ನಡೆಯುತ್ತಿದೆ. ಎಲ್ಲಿಗೆ ಬಂದು ನಿಂತಿದೆ ನಮ್ಮ ರಾಜ್ಯದ ಕಾನೂನು ಸುವ್ಯವಸ್ಥೆ? ಯಾರ ರಕ್ಷಣೆಗಾಗಿ ಸರ್ಕಾರ ಕೆಲಸ ಮಾಡುತ್ತಿದೆ? ಭ್ರಷ್ಟಾಚಾರದೊಂದಿಗೆ ಕೊಲೆ ಸುಲಿಗೆ, ದರೋಡೆ, ಒಂದೇ ವಾರದಲ್ಲಿ 4 ಅತ್ಯಾಚಾರ ಪ್ರಕರಣಳು ರಾರಾಜಿಸುತ್ತಿದ್ದರೂ "ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ ಎಂದು ಹಸಿ ಸುಳ್ಳು ಬೊಗಳುತ್ತಿರುವ ಹೊಣೆಗೇಡಿ ಸರ್ಕಾರದ ಯಾರನ್ನು ಪೆದ್ದರನ್ನಾಗಿ ಮಾಡಲು ಹೊರಟಿದೆ?

ಬಹುಶಃ 14 ವರ್ಷದ ಬಾಲಕಿ ಮೇಲಿನ ಪ್ರಕರಣ ನಡೆಯದೇ ಹೋಗಿದ್ದಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ಮಾನಭಂಗದ ಪ್ರಕರಣಗಳು ಇಷ್ಟು ತೀವ್ರ ಸ್ವರೂಪ ಪಡೆಯುತ್ತಿರಲಿಲ್ಲವೇನೋ. 9ನೇ ತರಗತಿಯಲ್ಲಿ ಓದುತ್ತಿದ್ದ ಕಂದಮ್ಮನ ಮೇಲೆ ನಡೆದ ಅತ್ಯಾಚಾರ ಪ್ರಕರಣವನ್ನು ಆತ್ಮಹತ್ಯೆ ಪ್ರಕರಣ ಎಂದು ಮುಚ್ಚಿಹಾಕಲು ಹೊರಟಿರುವುದೂ ಅಲ್ಲದೇ ಮೃಗಗಳಂತೆ ಅತ್ಯಾಚಾರ ನಡೆಸಿದವರನ್ನು ಈವರೆಗೂ ಬಂಧಿಸದೇ ಪರೋಕ್ಷವಾಗಿ ರಕ್ಷಿಸಲು ಮುಂದಾಗಿದೆಯಲ್ಲಾ ಇದೆಂಥಾ ಲಜ್ಜೆಗೇಡಿ ಸರ್ಕಾರ?

ಅತ್ಯಾಚಾರ ಪ್ರಕರಣಗಳಲ್ಲಿ ಸರ್ಕಾರ ನಡೆದುಕೊಳ್ಳುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಅಣಕಿಸುತ್ತಿದೆ. ಬಾಯಿಬಿಟ್ಟರೆ ಗಾಂಧಿ ತತ್ವ, ಕೋಮುವಾದಿ, ಸಾಮಾಜಿಕ ನ್ಯಾಯ ಅಂತೆಲ್ಲಾ ಹಲುಬುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಅತ್ಯಾಚಾರ ಪ್ರಕರಣಗಳಂತಹ ಸೂಕ್ಷ್ಮ ವಿಷಯದಲ್ಲಿ ರಾಜಕೀಯ ಮಾಡುತ್ತಿರುವುದೇಕೆ? ವಿರೋಧಪಕ್ಷವನ್ನು ಬಿಡಿ, ರಾಜಕೀಯ ವಿರೋಧಿಗಳನ್ನೂ ಬದಿಗೆಸೆಯಿರಿ, ಯಾರೇನೇ ಹೇಳಲಿ ತಮ್ಮ ರಾಜ್ಯದಲ್ಲಿ ಇಂಥದೊಂದು  ಅಮಾನವೀಯ ಘಟನೆ ನಡೆಯಬಾರದು, ನಡೆದರೂ ಅದು ಮರುಕಳಿಸದಂತೆ ತೀವ್ರ ಕಟ್ಟೆಚ್ಚರ ವಹಿಸಬೇಕೆಂಬ ಕನಿಷ್ಠ ಸ್ವಾಭಿಮಾನವೂ ಇಲ್ಲ. "ನಾವಿನ್ನೆಷ್ಟು ದಿನ ಇರುತ್ತೇವೋ ಗೊತ್ತಿಲ್ಲ ಹೈಕಮಾಂಡ್ ಕೃಪಾ ಕಟಾಕ್ಷ ಇರುವವರೆಗೂ ಅಷ್ಟೇ ಇರುವುದು ಎಂದು ಬಹಿರಂಗವಾಗಿ ಹೇಳಿಕೆ ನೀಡುವವರಿಗೆ ರಾಜ್ಯದ ಬಗ್ಗೆ  ಹೇಗೆ ತಾನೇ ಕಾಳಜಿ ಇದ್ದೀತು? ಅವರ ಕಾಳಜಿ ಏನಿದ್ದರೂ ಇರುವಷ್ಟು ದಿನ  ಹೈಕಮಾಂಡ್ ನ್ನು ವಿಶ್ವಾದಲ್ಲಿಟ್ಟುಕೊಂಡು  ಸಿ.ಎಂ ಪದವಿಯಲ್ಲಿ ಉಳಿದುಕೊಳ್ಳುವುದಕ್ಕೆ ಮಾತ್ರ ಸೀಮಿತ.

ಇಷ್ಟಕ್ಕೂ ತೀರ್ಥಹಳ್ಳಿಯ ಪ್ರಕರಣದಲ್ಲಿ ಸರ್ಕಾರದ ನಡೆ ಅನುಮಾನ ಹುಟ್ಟಿಸುತ್ತಿಲ್ಲವೇ?  ಅಕ್ಟೋಬರ್ 29ರಂದು ತೀರ್ಥಹಳ್ಳಿಯಲ್ಲಿ ನಡೆದಿರುವ ಅತ್ಯಾಚಾರ ಘಟನೆಯ ಬಗ್ಗೆ ಪೊಲೀಸರು ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ನ.3ರ ವರೆಗೂ ಸಿಗದೇ ಇದ್ದ ಬಾಲಕಿ ನಂದಿತಾ ಡೆತ್ ನೋಟ್ ನ.4ರಂದು ಧಿಡೀರ್ ಪ್ರತ್ಯಕ್ಷವಾಗಿದ್ದು ಹೇಗೆ? ಅಡೂ ಟೈಪಿಸಿದ ಪ್ರತಿಯೊಂದು ದೊರೆಯುತ್ತದೆ!!! ಇದಕ್ಕೂ ಮುನ್ನ ಅಂದರೆ ಬಾಲಕಿ ಮೇಲೆ ಅತ್ಯಾಚಾರ ನಡೆದ ಬೆನ್ನಲ್ಲೇ ಅಲ್ಲಿನ ತಾಲೂಕು ಸಂಯುಕ್ತ ಮುಸ್ಲಿಂ ಒಕ್ಕೂಟದಿಂದ, ನಿರ್ದಿಷ್ಟ ಪ್ರದೇಶಗಳಿಗೆ ಭದ್ರತೆ ಕೋರಿ ಪೊಲೀಸ್ ಠಾಣೆಗೆ ಪತ್ರವೊಂದು ರವಾನೆಯಾಗುತ್ತದೆ. ಅಲ್ಲಾ ಎಲ್ಲೋ ಅತ್ಯಾಚಾರ ನಡೆದು, ಬಾಲಕಿ ಮೃತಪಟ್ಟರೆ ಅದನ್ನು ಖಂಡಿಸುವುದನ್ನು ಬಿಟ್ಟು ಭದ್ರತೆಗಾಗಿ ಪೊಲೀಸರಿಗೆ ಪತ್ರ ಬರೆಯುತ್ತಾರೆ ಎಂದರೆ ಇದರ ಅರ್ಥವೇನು? ಈ ಅತ್ಯಾಚಾರ ಪ್ರಕರಣಕ್ಕೆ Communal colour ಕೊಟ್ಟವರು ಯಾರು?

ನಂದಿತಾ ಮೇಲೆ ಅತ್ಯಾಚಾರ ನಡೆಸಿ ತಲೆಮರೆಸಿಕೊಂಡಿರುವವರು ಅಲ್ಲಿನ ಸ್ಥಳೀಯ ಮುಸ್ಲಿಂ ಯುವಕರು ಎಂಬುದು ಜಗಜ್ಜಾಹೀರಾಗಿದೆ. ಅಂತದ್ದರಲ್ಲಿ ಭದ್ರತೆಗಾಗಿ ಪತ್ರ ಬರೆದ ಸಂಘಟನೆಯವರನ್ನೇ ವಿಚಾರಣೆಗಾಗಿ ಬಂಧಿಸುವ ಬದಲು   ಭದ್ರತೆಗಾಗಿ ಬೇಡಿಕೆಯಿಟ್ಟಿರುವ ಮೀನು ಮಾರ್ಕೆಟ್, ಮಸೀದಿ, ಅಲ್ಪಸಂಖ್ಯಾತ(?)ರು ಇರುವ ಪ್ರದೇಶಗಳಿಗೆ ಭದ್ರತೆ ನೀಡಿದ್ದಾರೆ ಎಂದರೆ ಇಡಿ ವ್ಯವಸ್ಥೆ ಯಾರ ಪರ ಕೆಲಸ ಮಾಡುತ್ತಿದೆ? ಅದನ್ನೂ ಬಿಡಿ ಪತ್ರ ಬರೆದ ನಂತರ ಭದ್ರತೆ ನೀಡಿ ಪೊಲೀಸರು ಮಾಡಿದ್ದೇನು? ಅತ್ಯಾಚಾರವೆಸಗಿದ್ದಾರೆ ಎಂದು ಹೇಳಲಾದ ಆರೋಪಿಗಳಿಗಾಗಿ ಶೋಧಕಾರ್ಯ ನಡೆಸುವ ಬದಲು ಸಂತ್ರಸ್ತ ಬಾಲಕಿಯ ಬ್ಯಾಗ್ ನಲ್ಲಿ ಡೆತ್ ನೋಟ್ ಹುಡುಕುವ ಸಾಹಸ! ಇವೆಲ್ಲವೂ ಆಳುವವರ ಬಗ್ಗೆ ಅನುಮಾನ ಮೂಡಿಸದೇ ಏನು ಮಾಡೀತು? ಇತರ ಪ್ರಕರಣಗಳಲ್ಲಿ 90 ಬಾರಿ ಅತ್ಯಾಚಾರವಾದರೂ ಒಂದೇ ಒಂದು ದೂರಿಗೆ ಆರೋಪಿಯನ್ನು ಕೂಡಲೇ ಬಂಧಿಸಲು ತುದಿಗಾಲಲ್ಲಿ ನಿಲ್ಲುತ್ತಾರಲ್ಲ  ಬಾಲಕಿ ಮೇಲೆ ಅತ್ಯಾಚಾರ ನಡೆಸಿರುವವರನ್ನು ಬಂಧಿಸುವಲ್ಲಿ ಅಷ್ಟೇ ತೀವ್ರತೆ ಏಕಿಲ್ಲ? ಆ ಮೂವರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲು ಸರ್ಕಾರಕ್ಕೇನು ಇವರಿಗೇನು ಧಾಡಿ? ಹಾಗೆ ಮಾಡಿದ್ದರೆ ಪ್ರಕರಣಕ್ಕೆ ಕೋಮಿನ ಬಣ್ಣ ಹಚ್ಚಲಾಗುತ್ತಿದೆ ಎಂದು ಮಾಧ್ಯಮಗಳೆದುರು ಅರಚುವ ಸ್ಥಿತಿ ಬರುತ್ತಿರಲಿಲ್ಲ. ಈಗ ಹೇಳಿ ಅತ್ಯಾಚಾರ ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸದೇ ಅದಕ್ಕೆ ಕೋಮಿನ ಬಣ್ಣ ನೀಡುತ್ತಿರುವವರು ಯಾರು?

ಜು.22ರಂದು ನಡೆದ ಅತ್ಯಾಚಾರ ಪ್ರಕರಣದ ಬಗ್ಗೆ ಪ್ರಶ್ನಿಸಹೋದರೆ ನಿಮಗಿರುವುದು ಅದೊಂದೇ ನ್ಯೂಸಾ? ಬೇರೆ ಸುದ್ದಿ ಇಲ್ಲವಾ ಎಂದು ಮುಖ್ಯಮಂತ್ರಿಗಳು ಪ್ರಶ್ನಿಸುತ್ತಾರೆ. ಇದೇ ಮುಂದುವರೆಯುತ್ತಿದ್ದು ಮತ್ತೊಮ್ಮೆ ಸರ್ಕಾರವನ್ನು ಪ್ರಶ್ನಿಸಿದರೆ ನಿಮ್ಮ ಟಿ.ಆರ್.ಪಿ ಹೆಚ್ಚಿಸಿಕೊಳ್ಳಲು ಇಂತಹ ಪ್ರಕರಣಗಳನ್ನು ವೈಭವೀಕರಿಸುತ್ತಿದ್ದೀರ ಎಂದು ಗೃಹ ಸಚಿವರು ಉದ್ಗಾರ ತೆಗೆಯುತ್ತಾರೆ. ಅಂದರೆ ಇವರು ರಾಜ್ಯದಲ್ಲಿ ನಡೆಯುತ್ತಿರುವ ಅತ್ಯಾಚಾರಗಳನ್ನು ಒಪ್ಪುತ್ತಾರೆ. ಅದನ್ನು ತಡೆಗಟ್ಟಲು ಸರ್ಕಾರ ವಿಫಲವಾಗಿದೆ ಎಂಬುದನ್ನೂ ಪರೋಕ್ಷವಾಗಿ ಒಪ್ಪುತ್ತಾರೆ. ಆದರೆ ಅದನ್ನು ಎಲ್ಲಿಯೂ ಹೇಳಬಾರದು. ಇದೇ ಕಾಂಗ್ರೆಸ್ ನ ಮನಸ್ಥಿತಿ!
ಅಲ್ಲಿಗೆ ಇವರು ಹೇಳುತ್ತಿರುವುದಾದರೂ ಏನು? ಮಾಧ್ಯಮಗಳು ಎಲ್ಲೇ ಅತ್ಯಾಚಾರ ಪ್ರಕರಣಗಳು ನಡೆದರೂ ಅದನ್ನು ಬಿತ್ತರಿಸದೇ ರಾಜ್ಯದಲ್ಲಿ ಸಮಸ್ತವೂ ಕ್ಷೇಮವಾಗಿದೆ ಎಂದು ಜನತೆಗೆ ಸುಳ್ ಸುದ್ದಿ ನೀಡುತ್ತಾ ಕಾಂಗ್ರೆಸ್ ಕೃಪಾಪೋಷಿತ ನಾಲಾಯಕರನ್ನು ಹೊಗಳಬೇಕು ಎಂದಲ್ಲವೇ? ನಾಚಿಕೆಯಾಗುವುದಿಲ್ಲವೇ ಮಾಧ್ಯಮಗಳೆದುರಿಗೇ ಇಂತಹ ಹೇಕೆ ನೀಡಲು? ಸ್ವಾಮಿ ಗೃಹ ಸಚಿವರೆ, ಬೇರೆ ಕೆಲಸವಿಲ್ಲವೆಂದಾಗಲೀ ಟಿ.ಆರ್.ಪಿ ಗೋಸ್ಕರ ಅತ್ಯಾಚಾರ ಪ್ರಕರಣಗಳನ್ನು ವೈಭವೀಕರಿಸುವಷ್ಟು ಮಾಧ್ಯಮಗಳಿನ್ನೂ ನೈತಿಕವಾಗಿ ಭ್ರಷ್ಟವಾಗಿಲ್ಲ.

ಸಿದ್ದರಾಮಯ್ಯ ಸರ್ಕಾರದ ನಡೆ ದೇಶದ ಯಾವ ಸಾಮನ್ಯ ಪ್ರಜೆಗಾದರೂ ರೇಜಿಗೆ ಹುಟ್ಟಿಸುತ್ತದೆ. ಅನ್ಯಾಯವನ್ನು ವಿರೋಧಿಸಿ, ಸಾಮಾಜಿಕ ನ್ಯಾಯದ ಬಗ್ಗೆ ಭಾಷಣ ಬಿಗಿಯುವ ಸಿದ್ದರಾಮಯ್ಯನವರು ವಿರೋಧ ಪಕ್ಷದ ನಾಯಕರಾಗಿದ್ದಾಗ ವಿಧಾನಸೌಧದಲ್ಲೇ ತೋಳು ತಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದರು. ಬಹುಶಃ ಜನ ಇನ್ನೂ ಮರೆತಿಲ್ಲ. ಅವರದ್ದೇ ಸರ್ಕಾರವಿದೆ. ಮಹಿಳೆಯರು, ತಾಯಂದಿರ ನೋವು ಮುಗಿಲು ಮುಟ್ಟಿದೆ. ಯಾವ ಕ್ಷಣದಲ್ಲಿ ಎಲ್ಲಿ ರೇಪ್ ನಡೆದಿದೆ ಎಂದು ಬ್ರೇಕಿಂಗ್ ನ್ಯೂಸ್ ಬರುತ್ತದೋ ಯಾರಿಗೂ ಗೊತ್ತಿಲ್ಲ. ಅತ್ಯಾಚಾರಕ್ಕಾಗಿ ಕೆಟ್ಟ ಹೆಸರು ಪಡೆಯುತ್ತಿರುವುದನ್ನು ನೋಡಿಕೊಂಡೂ, ಅಂದುತೋಳು ತಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದ ಸಿದ್ದರಾಮಯ್ಯ ಅವರ  ಪೌರುಷ ಈಗೆಲ್ಲಿ ಹೋಯಿತು ಎಂಬುದೂ ಗೊತ್ತಾಗುತ್ತಿಲ್ಲ! ಸಂವೇದನೆ ಇರುವ ಯಾವ ಮುಖ್ಯಮಂತ್ರಿಯೂ ಅತ್ಯಾಚಾರದಂತಹ ಹೀನ ಕೃತ್ಯಗಳಿಗೆ ತೋಳು ತಟ್ಟಿ ಸವಾಲೆಸೆಯುತ್ತಾನೇಯೇ ಹೊರತು ವಿಧಾನಸೌಧವೆಂಬ ದೇಗುಲದಲ್ಲಿ ರಾಜಕೀಯ ಕಾರಣಗಳಿಂದಾಗಿ ರೌಡಿಯಂತೆ ತೋಳು ತಟ್ಟುವುದಿಲ್ಲ. alas!